<p><strong>ಹುಮನಾಬಾದ್</strong>: ‘12ನೇ ಶತಮಾನದ ಶರಣರ ವಚನಗಳು ಇಂದಿನ ತಂತ್ರಜ್ಞಾನ ಯುಗದಲ್ಲೂ ಚಿಂತನೆಗಳಾಗಿ ಮುಂದುವರೆಯುತ್ತಿವೆ’ ಎಂದು ಸಾಹಿತಿ ಬಸವರಾಜ ದಯಾಸಾಗರ ತಿಳಿಸಿದರು.</p>.<p>ಪಟ್ಟಣದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಡಾ.ಜಯದೇವಿ ಗಾಯಕವಾಡ ಅವರ ‘ಬಯಲ ಬೆಳಕಿನ ವಚನಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಪ್ರಚಲಿತ ವಿಷಯಗಳ ಬಗ್ಗೆ ಸಾಮಾಜಿಕ ವೈಚಾರಿಕ ನಿಲುವನ್ನು ಡಾ.ಜಯದೇವಿ ಗಾಯಕವಾಡ ಅವರು ಹೊಂದಿದ್ದಾರೆ. ಕಾವ್ಯ, ಗಜಲ್, ಕಾದಂಬರಿ ಸೇರಿದಂತೆ ಎಲ್ಲ ಬರಹಗಳಲ್ಲಿ ವೈಚಾರಿಕವಾಗಿ ಬರೆಯುವ ಕೆಲವೇ ಲೇಖಕರಲ್ಲಿ ಇವರ ಹೆಸರು ಎದ್ದು ಕಾಣುತ್ತದೆ’ ಎಂದರು.</p>.<p>ಲೇಖಕ ಉಮೇಶ ಮಾತನಾಡಿ, ‘ಇವರ ಬರಹದಲ್ಲಿ ಪ್ರಗತಿಪರ, ವೈಚಾರಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಬದ್ಧತೆಯ ಚಿಂತನೆಗಳು ಇರುವುದರಿಂದ ಓದುಗರ ಗಮನ ಸೆಳೆಯುತ್ತಾರೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ವಿಜಯಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಪೀರಪ್ಪ ಸಜ್ಜನ್, ಚೈತ್ರಾ, ಪ್ರಿಯದರ್ಶಿನಿ, ಸೃಷ್ಠಿ, ಸಿದ್ಧಾರ್ಥ ಮಠದ, ಸಿದ್ಧಾರ್ಥ ಜಿ.ಸಾಕ್ಷಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್</strong>: ‘12ನೇ ಶತಮಾನದ ಶರಣರ ವಚನಗಳು ಇಂದಿನ ತಂತ್ರಜ್ಞಾನ ಯುಗದಲ್ಲೂ ಚಿಂತನೆಗಳಾಗಿ ಮುಂದುವರೆಯುತ್ತಿವೆ’ ಎಂದು ಸಾಹಿತಿ ಬಸವರಾಜ ದಯಾಸಾಗರ ತಿಳಿಸಿದರು.</p>.<p>ಪಟ್ಟಣದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಡಾ.ಜಯದೇವಿ ಗಾಯಕವಾಡ ಅವರ ‘ಬಯಲ ಬೆಳಕಿನ ವಚನಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಪ್ರಚಲಿತ ವಿಷಯಗಳ ಬಗ್ಗೆ ಸಾಮಾಜಿಕ ವೈಚಾರಿಕ ನಿಲುವನ್ನು ಡಾ.ಜಯದೇವಿ ಗಾಯಕವಾಡ ಅವರು ಹೊಂದಿದ್ದಾರೆ. ಕಾವ್ಯ, ಗಜಲ್, ಕಾದಂಬರಿ ಸೇರಿದಂತೆ ಎಲ್ಲ ಬರಹಗಳಲ್ಲಿ ವೈಚಾರಿಕವಾಗಿ ಬರೆಯುವ ಕೆಲವೇ ಲೇಖಕರಲ್ಲಿ ಇವರ ಹೆಸರು ಎದ್ದು ಕಾಣುತ್ತದೆ’ ಎಂದರು.</p>.<p>ಲೇಖಕ ಉಮೇಶ ಮಾತನಾಡಿ, ‘ಇವರ ಬರಹದಲ್ಲಿ ಪ್ರಗತಿಪರ, ವೈಚಾರಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಬದ್ಧತೆಯ ಚಿಂತನೆಗಳು ಇರುವುದರಿಂದ ಓದುಗರ ಗಮನ ಸೆಳೆಯುತ್ತಾರೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ವಿಜಯಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಪೀರಪ್ಪ ಸಜ್ಜನ್, ಚೈತ್ರಾ, ಪ್ರಿಯದರ್ಶಿನಿ, ಸೃಷ್ಠಿ, ಸಿದ್ಧಾರ್ಥ ಮಠದ, ಸಿದ್ಧಾರ್ಥ ಜಿ.ಸಾಕ್ಷಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>