ಡಿ. 9ರಂದು ಬೆಳಿಗ್ಗೆ 8ಕ್ಕೆ ದೇವಿಯ ಪಲ್ಲಕಿ ಮೆರವಣಿಗೆ, ಪುರವಂತಿಗೆ ಸೇವೆ, ಡೊಳ್ಳು ಕುಣಿತ, ದೇವಿಯ ಮೂರ್ತಿಯೊಂದಿಗೆ ಸುಮಂಗಲಿಯರ ಕುಂಭ ಕಳಸ, ಶಾಲಾ ಮಕ್ಕಳ ಕೋಲಾಟ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಹೀರಾಬಾದ್ ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತರು, ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಸೇಡಂ ತಾಲ್ಲೂಕಿನ ಮಳಖೇಡದ ಹಜರತ್ ಸೈಯದ್ ಷಾಹ ಮುಸ್ತಫಾ ಖಾದ್ರಿ, ಸಜ್ಜಾದಾನ ಶೀನ್ ರೋಜ್-ಎ-ರಹಮಾನಿಯಾ ಸಾನ್ನಿಧ್ಯ ವಹಿಸುವರು. ರಾತ್ರಿ 10ಕ್ಕೆ ಆಕಾಶವಾಣಿ ಕಲಾವಿದರಿಂದ ಸಂಗೀತ ದರಬಾರ್ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.