ಬೆಂಗಳೂರಿನಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಸ್ವಾಮೀಜಿಗೆ ಭೇಟಿಯಾಗಿ, ಭಾಲ್ಕಿ ಪಟ್ಟಣದಲ್ಲಿ ಡಿ.2ರಂದು ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ತಾವುಗಳು ಆ ಸಮಾರಂಭದ ಸಾನ್ನಿಧ್ಯ ವಹಿಸಿ ಭೀಮಣ್ಣ ಖಂಡ್ರೆ ಅವರ ಜತೆಗೆ ಜಿಲ್ಲೆಯ ಭಕ್ತರನ್ನು ಆಶೀರ್ವದಿಸಬೇಕು ಎಂದು ಕೋರಲಾಗಿದೆ.