ಹುಮನಾಬಾದ್: ‘ಜೆಎಂಎಫ್ಸಿ ನ್ಯಾಯಾಲಯದ ಮೂವರು ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು’ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ಮೂವರು ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿ,‘ಆರೋಗ್ಯ ತಪಾಸಣೆ ಬಳಿಕ ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತು ಚರ್ಚಿಸಲಾಯಿತು’ ಎಂದು ಹೇಳಿದರು.
ಜೆಎಂಎಫ್ಸಿ ಪ್ರಧಾನ ನ್ಯಾಯಾಧೀಶ ಅಪ್ಪಾಸಾಬ್ ನಾಯಕ್ ಮಾತನಾಡಿ,‘ಕೋವಿಡ್-19 ಸೋಂಕು ಹರಡದಂತೆ ತಡೆಯಲು ಸರ್ಕಾರ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದರು.
ಜೆಎಂಎಫ್ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸರಸ್ವತಿದೇವಿ, ಗಗನ ಎಂ.ಆರ್. ತಜ್ಞ ವೈದ್ಯರಾದ ಡಾ.ಬಸವಂತರಾವ್ ಗುಮ್ಮೆದ್, ಡಾ.ಇಂದ್ರಜಿತ್ ಚಂದಾ, ಡಾ.ವಿಶ್ವ ಸೈನೀರ, ಶರಣಬಸವ, ತೌಸೀಫ್, ಸುರೇಶ, ಶ್ರೀಶೈಲ್, ಮಾಣಿಕ್ ಹಾಗೂ ವೆಂಕಟೇಶ ಇದ್ದರು.