<p><strong>ಬೀದರ್</strong>: ಮಹಾಮಾರಿಗಳಲ್ಲಿ ಒಂದಾಗಿರುವ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ. ಅನೇಕರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದಾರೆ ಎಂದು ಹೈದರಾಬಾದ್ನ ಕೇರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಪಿನ್ ಗೋಯಲ್ ಹೇಳಿದರು.</p>.<p>ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಹಾಲ್ನಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದರೂ, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ತಿಳಿಸಿದರು.</p>.<p>ಎಷ್ಟೋ ಬಾರಿ ಕ್ಯಾನ್ಸರ್ ಲಕ್ಷಣಗಳು ರೋಗಿ ಅರಿವಿಗೆ ಬರುವುದಿಲ್ಲ. ಗೊತ್ತಾದಾಗ ತಡವಾಗಿರುತ್ತದೆ. ಚಿಕಿತ್ಸಾ ಹಂತವನ್ನು ಮೀರಿರುತ್ತದೆ. ಹೀಗಾಗಿ ಏನಾದರೂ ದೈಹಿಕ ಬದಲಾವಣೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು.</p>.<p>ಭಾರತೀಯ ಜೀವ ವಿಮಾ ನಿಗಮದ ಬೀದರ್ ಶಾಖೆ ವ್ಯವಸ್ಥಾಪಕ ರಮೇಶ ಗೈಬಾ, ನಿಗಮದ ಯೋಜನೆಗಳ ಕುರಿತು ಮಾಹಿತಿ ನೀಡಿದರು.</p>.<p>ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಿತಿನ್ ಕರ್ಪೂರ್, ಡಾ. ನಾಗೇಶ ಪಾಟೀಲ, ಸುಧೀಂದ್ರ, ಡಾ.ನಿತೇಶಕುಮಾರ ಬಿರಾದಾರ, ಜಯೇಶ್ ಪಟೇಲ್, ಆಕಾಶ ನಾಗಮಾರಪಳ್ಳಿ, ಪ್ರವೀಣ ಗೋಯಲ್ ಉಪಸ್ಥಿತರಿದ್ದರು.</p>.<p>ಕ್ಲಬ್ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ ಸ್ವಾಗತಿಸಿದರು. ಖಜಾಂಚಿ ರಿತೇಶ್ ಸುಲೆಗಾಂವ್ ನಿರೂಪಿಸಿದರು. ಸತೀಶ್ ಸ್ವಾಮಿ ವಂದಿಸಿದರು.</p>.<p>ಕಾರ್ಯಕ್ರಮವನ್ನು ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಅನೇಕರು ಝೂಮ್ ಆ್ಯಪ್ ಬಳಸಿಯೂ ಕಾರ್ಯಕ್ರಮ ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮಹಾಮಾರಿಗಳಲ್ಲಿ ಒಂದಾಗಿರುವ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ. ಅನೇಕರು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದಾರೆ ಎಂದು ಹೈದರಾಬಾದ್ನ ಕೇರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿಪಿನ್ ಗೋಯಲ್ ಹೇಳಿದರು.</p>.<p>ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಹಾಲ್ನಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದರೂ, ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ತಿಳಿಸಿದರು.</p>.<p>ಎಷ್ಟೋ ಬಾರಿ ಕ್ಯಾನ್ಸರ್ ಲಕ್ಷಣಗಳು ರೋಗಿ ಅರಿವಿಗೆ ಬರುವುದಿಲ್ಲ. ಗೊತ್ತಾದಾಗ ತಡವಾಗಿರುತ್ತದೆ. ಚಿಕಿತ್ಸಾ ಹಂತವನ್ನು ಮೀರಿರುತ್ತದೆ. ಹೀಗಾಗಿ ಏನಾದರೂ ದೈಹಿಕ ಬದಲಾವಣೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು.</p>.<p>ಭಾರತೀಯ ಜೀವ ವಿಮಾ ನಿಗಮದ ಬೀದರ್ ಶಾಖೆ ವ್ಯವಸ್ಥಾಪಕ ರಮೇಶ ಗೈಬಾ, ನಿಗಮದ ಯೋಜನೆಗಳ ಕುರಿತು ಮಾಹಿತಿ ನೀಡಿದರು.</p>.<p>ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಿತಿನ್ ಕರ್ಪೂರ್, ಡಾ. ನಾಗೇಶ ಪಾಟೀಲ, ಸುಧೀಂದ್ರ, ಡಾ.ನಿತೇಶಕುಮಾರ ಬಿರಾದಾರ, ಜಯೇಶ್ ಪಟೇಲ್, ಆಕಾಶ ನಾಗಮಾರಪಳ್ಳಿ, ಪ್ರವೀಣ ಗೋಯಲ್ ಉಪಸ್ಥಿತರಿದ್ದರು.</p>.<p>ಕ್ಲಬ್ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ ಸ್ವಾಗತಿಸಿದರು. ಖಜಾಂಚಿ ರಿತೇಶ್ ಸುಲೆಗಾಂವ್ ನಿರೂಪಿಸಿದರು. ಸತೀಶ್ ಸ್ವಾಮಿ ವಂದಿಸಿದರು.</p>.<p>ಕಾರ್ಯಕ್ರಮವನ್ನು ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಅನೇಕರು ಝೂಮ್ ಆ್ಯಪ್ ಬಳಸಿಯೂ ಕಾರ್ಯಕ್ರಮ ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>