ಭಾಲ್ಕಿ: ತಾಲ್ಲೂಕಿನ ಕಲವಾಡಿ ಗ್ರಾಮದ ಬಸವೇಶ್ವರ ವೃತ್ತಕ್ಕೆ ಸೋಮವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದಿದೆ.
ಬಸವೇಶ್ವರ ವೃತ್ತ ನೆಲಕ್ಕುರುಳಿದೆ. ರಸ್ತೆ ಪಕ್ಕದ ಮನೆ ಮುಂದೆ ಮಲಗಿದ್ದ ಎಮ್ಮೆ ಸಾವನ್ನಪ್ಪಿದೆ. ಬೊಲೆರೊ ಪಿಕ್ಅಪ್ ವಾಹನಕ್ಕೆ ಹಾನಿಯಾಗಿದೆ.
ಸ್ವಿಫ್ಟ್ ಕಾರ್, ಬ್ರೆಜರ್ ವಾಹನ ಚಾಲಕರ ನಿರ್ಲಕ್ಷದಿಂದ ಈ ಘಟನೆ ನಡೆದಿದೆ.
ಸ್ಥಳಕ್ಕೆ ಡಿವೈಎಸ್ಪಿ ದೇವರಾಜ್ ಬಿ., ಸಿಪಿಐ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.