ಬಸವಕಲ್ಯಾಣ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ಸೇವಾ ಯೋಜನೆ ಘಟಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸೋಮವಾರ ಸ್ವಚ್ಛ ಭಾರತ ಜನಜಾಗೃತಿ ಅಭಿಯಾನ ನಡೆಯಿತು.
ಸಂಸ್ಥೆ ಕಾರ್ಯದರ್ಶಿ ನರಸಿಂಗರಾವ್ ಕಾಂಬಳೆ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರಾಂಶುಪಾಲ ಡಾ.ಜೈಶೇನಪ್ರಸಾದ, ಯೋಜನಾಧಿಕಾರಿ ಶ್ರೀಧರ ಛಲವಾದಿ, ಲಕ್ಷ್ಮಣ ಕಾರಾಮುಂಗೆ, ನಾಗೇಶ ಡೊಂಗರೆ, ಸತೀಶ ಕಾಂಬಳೆ, ಸಂತೋಷ ಶಿಂಧೆ ಹಾಗೂ ದೀಪಕ್ ಮೋರೆ ಇದ್ದರು.
ದ್ರವತ್ಯಾಜ್ಯ ನಿರ್ವಹಣೆ, ವೈಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ, ಪ್ಲಾಸ್ಟಿಕ್ ನಿಷೇಧದ ಕುರಿತಾಗಿ ಭಿತ್ತಿ ಚಿತ್ರಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.