ರಾಯಚೂರು/ಬೀದರ್: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ನಸುಕಿನಲ್ಲಿಕರೇಗುಡ್ಡ ಗ್ರಾಮದಿಂದ ಬೀದರ್ ಜಿಲ್ಲೆ ಉಜಳಂಬ ಗ್ರಾಮದ ಕಡೆಗೆ ಹೊರಟರು.
ಬೆಳಿಗ್ಗೆ 11ಕ್ಕೆ ಬಸವಕಲ್ಯಾಣ ಮಾರ್ಗವಾಗಿ ಗ್ರಾಮ ವಾಸ್ತವ್ಯಕ್ಕೆ ಆರಿಸಿಕೊಂಡಿರುವ ಉಜಳಂಬ ಗ್ರಾಮ ತಲುಪಲಿರುವ ಎಚ್ಡಿಕೆ ಅಲ್ಲಿನಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿಯೇ ಜನತಾ ದರ್ಶನಕ್ಕೆ ಕೌಂಟರ್ ತೆರೆಯಲಾಗಿದ್ದು, ಜನರಿಂದ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದು ಬಿಗಿ ಭದ್ರತೆ ಒದಗಿಸಿದ್ದಾರೆ.