ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಓಟಕ್ಕೆ ಚಾಲನೆ ನೀಡಿ ಮಾತನಾಡಿ,‘ಓಟದ ಸ್ಪರ್ಧೆ ಆಯೋಜಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೆರುಗು ಹೆಚ್ಚಿಸಲಾಗಿದೆ. ಈ ವ್ಯವಸ್ಥೆಗೈದಿರುವ ವಿವಿಧ ಬಸವಪರ ಸಂಘಟನೆಗಳು ಹಾಗೂ ವ್ಯಾಪಾರಸ್ಥರಿಗೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಮಾತನಾಡಿ,‘ಓಟದ ಸ್ಪರ್ಧೆ ಆಯೋಜಿಸಿ ಸ್ವಾತಂತ್ರ್ಯದ ಮೆರುಗು ಹೆಚ್ಚಿಸುವ ಯೋಚನೆ ಯಾರ ತಲೆಯಲ್ಲಿ ಮೊದಲು ಹೊಳೆಯಿತೋ ಪ್ರಥಮವಾಗಿ ಅವರು ಅಭಿನಂದನಾರ್ಹರು’ ಎಂದರು. ಡಾ.ಗಂಗಾಂಬಿಕಾ ಅಕ್ಕ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ, ಎಎಸ್ಪಿ ಶಿವಾಂಶು ರಜಪೂತ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಹಾಗೂ ರಾಜಕೀಯ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.