<p><strong>ಬೀದರ್</strong>: ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.</p>.<p>ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನ, ಬಾವಗಿಯ ಭದ್ರೇಶ್ವರ ಮಠ, ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ, ಮುತ್ತಂಗಿ ರಾಚೋಟೇಶ್ವರ ದೇವಸ್ಥಾನ, ರೇಕುಳಗಿ ಮೌಂಟ್ನ ಬುದ್ಧ ವಿಹಾರ, ಕಮಠಾಣದ ಕಮಠಾಣ ಸಾಬ್ ದರ್ಗಾ, ಬಗದಲ್ ಸಾಹೇಬ್ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಬಾಪುರ ಕ್ರಾಸ್ ಸಮೀಪದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಶೋಕ ಖೇಣಿ ಅವರ ಪರ ಘೋಷಣೆಗಳನ್ನು ಕೂಗಿದರು.<br />ಬೀದರ್ನ ರಾಂಪುರೆ ಕಾಲೊನಿಯಿಂದ ಹೊನ್ನಿಕೇರಿ, ಅತಿವಾಳ, ಆಣದೂರು, ಬಾವಗಿ, ಮಂದಕನಳ್ಳಿ, ಶಮಶೇರನಗರ, ಕಮಠಾಣ, ಬಗದಲ್, ರೇಕುಳಗಿ ಮೌಂಟ್, ಮನ್ನಾಎಖ್ಖೆಳ್ಳಿ, ಚಾಂಗಲೇರಾ, ಮನ್ನಳ್ಳಿ, ಅಮಲಾಪರ ಮಾರ್ಗವಾಗಿ ಮರಳಿ ಬೀದರ್ ವರೆಗೆ ಬೈಕ್ ರ್ಯಾಲಿ ನಡೆಸಿದರು.</p>.<p>ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ ಕಮಠಾಣ, ಮುಖಂಡರಾದ ಗೋವರ್ಧನ್ ರಾಠೋಡ್, ಲೋಕೇಶ ಕನಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಸಂಭ್ರಮ ಆಚರಿಸಿದರು.</p>.<p>ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನ, ಬಾವಗಿಯ ಭದ್ರೇಶ್ವರ ಮಠ, ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ, ಮುತ್ತಂಗಿ ರಾಚೋಟೇಶ್ವರ ದೇವಸ್ಥಾನ, ರೇಕುಳಗಿ ಮೌಂಟ್ನ ಬುದ್ಧ ವಿಹಾರ, ಕಮಠಾಣದ ಕಮಠಾಣ ಸಾಬ್ ದರ್ಗಾ, ಬಗದಲ್ ಸಾಹೇಬ್ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.</p>.<p>ಬಾಪುರ ಕ್ರಾಸ್ ಸಮೀಪದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಶೋಕ ಖೇಣಿ ಅವರ ಪರ ಘೋಷಣೆಗಳನ್ನು ಕೂಗಿದರು.<br />ಬೀದರ್ನ ರಾಂಪುರೆ ಕಾಲೊನಿಯಿಂದ ಹೊನ್ನಿಕೇರಿ, ಅತಿವಾಳ, ಆಣದೂರು, ಬಾವಗಿ, ಮಂದಕನಳ್ಳಿ, ಶಮಶೇರನಗರ, ಕಮಠಾಣ, ಬಗದಲ್, ರೇಕುಳಗಿ ಮೌಂಟ್, ಮನ್ನಾಎಖ್ಖೆಳ್ಳಿ, ಚಾಂಗಲೇರಾ, ಮನ್ನಳ್ಳಿ, ಅಮಲಾಪರ ಮಾರ್ಗವಾಗಿ ಮರಳಿ ಬೀದರ್ ವರೆಗೆ ಬೈಕ್ ರ್ಯಾಲಿ ನಡೆಸಿದರು.</p>.<p>ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಂಸಾಬ ಕಮಠಾಣ, ಮುಖಂಡರಾದ ಗೋವರ್ಧನ್ ರಾಠೋಡ್, ಲೋಕೇಶ ಕನಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>