<p>ಬೀದರ್: ಸಹಕಾರ ಆಂದೋಲನವು ರೈತರನ್ನು ದೊಡ್ಡ ದೊಡ್ಡ ಭೂಮಾಲೀಕರ ಶೋಷಣೆಯಿಂದ ಮುಕ್ತಗೊಳಿಸಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ಹೇಳಿದರು.</p>.<p>ನಗರದ ಪ್ರತಾಪನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಬಾರ್ಡ್ ಪ್ರಾಯೋಜಿತ್ವದಲ್ಲಿ ಆಯೋಜಿಸಿರುವ ಕಡೂರು ತಾಲ್ಲೂಕು ಸಹಕಾರ ಸಂಘಗಳ ಅಧ್ಯಕ್ಷರ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಹಕಾರ ಸಂಘಗಳು ರೈತರಿಗೆ ಅವಶ್ಯಕ ಬಂಡವಾಳವನ್ನು ಸುಲಭವಾಗಿ ಒದಗಿಸುತ್ತಿವೆ. ಕೃಷಿ ಕ್ಷೇತ್ರವನ್ನು ಸ್ವಾವಲಂಬಿಯಾಗಿಸುವಲ್ಲಿ ಸಫಲವಾಗಿವೆ ಎಂದು ತಿಳಿಸಿದರು.</p>.<p>ಡಿಸಿಸಿ ಬ್ಯಾಂಕ್ ಪ್ರಯತ್ನದಿಂದಾಗಿ ಸಾಲ ಮನ್ನಾ ಯೋಜನೆಯಡಿ ಬೀದರ್ ಜಿಲ್ಲೆಯ 1.65 ಲಕ್ಷ ಸದಸ್ಯ ರೈತರ ರೂ. 527 ಕೋಟಿ ಸಾಲ ಮನ್ನಾ ಆಗಿದೆ ಎಂದು ಹೇಳಿದರು.</p>.<p>ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಸಹಕಾರ ಸಂಘಗಳು ಸಾಲದ ವ್ಯವಹಾರದ ಜತೆಗೆ ಮಾರಾಟ ಪ್ರಕ್ರಿಯೆಗಳನ್ನೂ ನಡೆಸುತ್ತಿವೆ. ನಾಫೆಡ್ ನೆರವಿನಿಂದ ಸಕ್ಕರೆ, ಚಹಾಪುಡಿ, ಎಣ್ಣೆ, ಸಾಬೂನು ತರಿಸಿಕೊಂಡು ಸಂಘಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಕಡೂರು ತಾಲ್ಲೂಕಿನ ಗಿರಿಯಾಪುರ ಸಹಕಾರ ಸಂಘದ ಅಧ್ಯಕ್ಷ ಚನ್ನಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿದರು.</p>.<p>ಎಸ್.ಜಿ. ಪಾಟೀಲ, ಮಂಜುನಾಥ, ದಿವ್ಯ ಮತ್ತು ಮೇಘನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಸಹಕಾರ ಆಂದೋಲನವು ರೈತರನ್ನು ದೊಡ್ಡ ದೊಡ್ಡ ಭೂಮಾಲೀಕರ ಶೋಷಣೆಯಿಂದ ಮುಕ್ತಗೊಳಿಸಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ ಗಾದಗಿ ಹೇಳಿದರು.</p>.<p>ನಗರದ ಪ್ರತಾಪನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ನಬಾರ್ಡ್ ಪ್ರಾಯೋಜಿತ್ವದಲ್ಲಿ ಆಯೋಜಿಸಿರುವ ಕಡೂರು ತಾಲ್ಲೂಕು ಸಹಕಾರ ಸಂಘಗಳ ಅಧ್ಯಕ್ಷರ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಹಕಾರ ಸಂಘಗಳು ರೈತರಿಗೆ ಅವಶ್ಯಕ ಬಂಡವಾಳವನ್ನು ಸುಲಭವಾಗಿ ಒದಗಿಸುತ್ತಿವೆ. ಕೃಷಿ ಕ್ಷೇತ್ರವನ್ನು ಸ್ವಾವಲಂಬಿಯಾಗಿಸುವಲ್ಲಿ ಸಫಲವಾಗಿವೆ ಎಂದು ತಿಳಿಸಿದರು.</p>.<p>ಡಿಸಿಸಿ ಬ್ಯಾಂಕ್ ಪ್ರಯತ್ನದಿಂದಾಗಿ ಸಾಲ ಮನ್ನಾ ಯೋಜನೆಯಡಿ ಬೀದರ್ ಜಿಲ್ಲೆಯ 1.65 ಲಕ್ಷ ಸದಸ್ಯ ರೈತರ ರೂ. 527 ಕೋಟಿ ಸಾಲ ಮನ್ನಾ ಆಗಿದೆ ಎಂದು ಹೇಳಿದರು.</p>.<p>ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ಸಹಕಾರ ಸಂಘಗಳು ಸಾಲದ ವ್ಯವಹಾರದ ಜತೆಗೆ ಮಾರಾಟ ಪ್ರಕ್ರಿಯೆಗಳನ್ನೂ ನಡೆಸುತ್ತಿವೆ. ನಾಫೆಡ್ ನೆರವಿನಿಂದ ಸಕ್ಕರೆ, ಚಹಾಪುಡಿ, ಎಣ್ಣೆ, ಸಾಬೂನು ತರಿಸಿಕೊಂಡು ಸಂಘಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.</p>.<p>ಕಡೂರು ತಾಲ್ಲೂಕಿನ ಗಿರಿಯಾಪುರ ಸಹಕಾರ ಸಂಘದ ಅಧ್ಯಕ್ಷ ಚನ್ನಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿದರು.</p>.<p>ಎಸ್.ಜಿ. ಪಾಟೀಲ, ಮಂಜುನಾಥ, ದಿವ್ಯ ಮತ್ತು ಮೇಘನಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>