ಭಾಲ್ಕಿ (ಬೀದರ್ ಜಿಲ್ಲೆ): ‘ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕೋವಿಡ್ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಮಠ ತೆಗೆದುಕೊಳ್ಳಲಿದೆ’ ಎಂದು ಇಲ್ಲಿಯ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
‘ಮಕ್ಕಳ ಪಾಲನೆ, ಪೋಷಣೆ ಜತೆಗೆ ಅವರಿಷ್ಟದವರೆಗೆ ಶಿಕ್ಷಣ ಕೊಡಿಸಲಾಗುವುದು’ ಎಂದಿದ್ದಾರೆ.
‘ಈ ಬಗ್ಗೆ ಸಾರ್ವಜನಿಕರು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು (ಮೊ.94489 47571), ಆಡಳಿತಾಧಿಕಾರಿ ಮೋಹನ್ ರೆಡ್ಡಿ (ಮೊ. 94489 47570) ಅವರಿಗೆ ಕರೆ ಮಾಡಿ’ ಎಂದುಪ್ರಕಟಣೆಯಲ್ಲಿ ತಿಳಿಸಿದ್ದಾರೆ.