ಬೀದರ್: ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಚುನಾವಣೆಗೆ ಶನಿವಾರ ಮೂವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
‘ಎ’ ವರ್ಗದ ಸದಸ್ಯತ್ವ ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಭಾಲ್ಕಿ ತಾಲ್ಲೂಕು ಮತಕ್ಷೇತ್ರದಿಂದ ವಸಂತರಾವ ಮಾರುತಿರಾವ, ಬೀದರ್ ತಾಲ್ಲೂಕು ಮತ ಕ್ಷೇತ್ರದಿಂದ ವೈಜಿನಾಥ ಅಣ್ಣೆಪ್ಪಾ, ಬಸವರಾಜ ನಾಗಶೆಟ್ಟಿ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಶುಕ್ರವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಭಾಲ್ಕಿ ತಾಲ್ಲೂಕು ಮತಕ್ಷೇತ್ರದಿಂದ ರಾಚಪ್ಪಾ ಬಸವಣಪ್ಪಾ ಪಾಟೀಲ, ನಾಗನಾಥ ದಾದಾರಾವ ಬಗದೋರೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಅಕ್ಟೋಬರ್ 4ರಂದು 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.