‘ನಾನು ಎಂ.ಎ. ಪದವೀಧರ. ಕೆಲ ವರ್ಷ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡಿದೆ. ಆದರೆ ಅವರು ಕೊಡುವ ಹಣ ನನ್ನ ಸ್ವಂತ ಖರ್ಚಿಗೂ ಸಾಕಾಗುತ್ತಿರಲಿಲ್ಲ. ಹೀಗಾಗಿ ಅದೂ ಬಿಟ್ಟು ಈಗ ಕೃಷಿ ಕಾಯದಲ್ಲಿ ತೊಡಗಿಸಿಕೊಂಡಿದ್ದೇನೆ. ಇತರೆ ಮೂರು ಎಕರೆ ಜಮೀನಿನಲ್ಲಿ ಟೊಮೆಟೊ, ಆಲು, ಬದನೆಕಾಯಿ ಸೇರಿದಂತೆ ತರಕಾರಿ ಹಣ್ಣು ಬೆಳೆಯುತ್ತೇನೆ. ಉದಗೀರ್ ಸಮೀಪ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ. ಎಲ್ಲ ಖರ್ಚು ಹೋಗಿ ವರ್ಷಕ್ಕೆ ₹5 ಲಕ್ಷ ಆದಾಯ ಬರುತ್ತದೆ. ಇದರ ಮೇಲೆ ನಮ್ಮ ಕುಟುಂಬ ಸುಖವಾಗಿ ಇದೆ’ ಎಂದು ವಾಡಿಕರ್ ಕೃಷಿಯಲ್ಲಿ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.