ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಬಿತ್ತನೆ ಬೀಜ ವಿತರಣೆಗೆ ಚಾಲನೆ

ರೈತರಿಗೆ ಗುಣಮಟ್ಟದ ಬೀಜ ವಿತರಿಸಿ: ಶಾಸಕ ಕಾಶೆಂಪೂರ್
Last Updated 3 ಜೂನ್ 2021, 17:10 IST
ಅಕ್ಷರ ಗಾತ್ರ

ಜನವಾಡ: ರಿಯಾಯಿತಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಬೀದರ್ ತಾಲ್ಲೂಕಿನ ಕಮಠಾಣ ಹಾಗೂ ಮನ್ನಳ್ಳಿ ಗ್ರಾಮಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಗುರುವಾರ ಚಾಲನೆ ನೀಡಿದರು.

ರೈತರಿಗೆ ಗುಣಮಟ್ಟದ ಬೀಜ ವಿತರಿಸಬೇಕು. ಸೋಯಾಬೀನ್ ಸೇರಿದಂತೆ ಯಾವುದೇ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಕಾರಣ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದೊಂದು ಊರಿನ ರೈತರಿಗೆ ಒಂದೊಂದು ಸಮಯ ನಿಗದಿ ಮಾಡಿ ಬೀಜ ವಿತರಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಬೀದರ್ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್, ಕೃಷಿ ಅಧಿಕಾರಿಗಳಾದ ಜಮಿರೊದ್ದಿನ್, ವಿಜಯಕುಮಾರ ಸಿರಂಜೆ ಇದ್ದರು.

‘ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’
‘ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

‘ಬೀಜ ಖರೀದಿಗೆ ಪಹಣಿ ಬೇಕೇ ಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರೈತರೊಬ್ಬರು ಗಮನ ಸೆಳೆದಾಗ, ಕಾಶೆಂಪೂರ್ ಸ್ಥಳದಲ್ಲೇ ಮೊಬೈಲ್‍ನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಸಂಪರ್ಕಿಸಿ, ಸ್ಪಷ್ಟೀಕರಣ ಬಯಸಿದರು.

‘ಬೀಜಕ್ಕೆ ಪಹಣಿ ಕಡ್ಡಾಯ ಮಾಡಿಲ್ಲ. ರೈತರು ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಬೀಜ ಪಡೆಯಬಹುದು’ ಎಂದು ಪಾಟೀಲ ತಿಳಿಸಿದರು.

‘ಬಳಿಕ ಕೃಷಿ ಇಲಾಖೆ ಆಯುಕ್ತರ ಕಚೇರಿ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದರು. ಬೀಜ ಖರೀದಿಗೆ ಪಹಣಿ ಕಡ್ಡಾಯಗೊಳಿಸಿಲ್ಲ. ಯಾವುದಾದರೊಂದು ಗುರುತಿನ ಚೀಟಿ ಪಡೆದು ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT