<p><strong>ಜನವಾಡ: </strong>ರಿಯಾಯಿತಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಬೀದರ್ ತಾಲ್ಲೂಕಿನ ಕಮಠಾಣ ಹಾಗೂ ಮನ್ನಳ್ಳಿ ಗ್ರಾಮಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಗುರುವಾರ ಚಾಲನೆ ನೀಡಿದರು.</p>.<p>ರೈತರಿಗೆ ಗುಣಮಟ್ಟದ ಬೀಜ ವಿತರಿಸಬೇಕು. ಸೋಯಾಬೀನ್ ಸೇರಿದಂತೆ ಯಾವುದೇ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.</p>.<p>ಕೋವಿಡ್ ಕಾರಣ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದೊಂದು ಊರಿನ ರೈತರಿಗೆ ಒಂದೊಂದು ಸಮಯ ನಿಗದಿ ಮಾಡಿ ಬೀಜ ವಿತರಿಸಬೇಕು ಎಂದು ತಿಳಿಸಿದರು.</p>.<p>ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಬೀದರ್ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್, ಕೃಷಿ ಅಧಿಕಾರಿಗಳಾದ ಜಮಿರೊದ್ದಿನ್, ವಿಜಯಕುಮಾರ ಸಿರಂಜೆ ಇದ್ದರು.</p>.<p class="Briefhead"><strong>‘ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’</strong><br />‘ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.</p>.<p>‘ಬೀಜ ಖರೀದಿಗೆ ಪಹಣಿ ಬೇಕೇ ಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರೈತರೊಬ್ಬರು ಗಮನ ಸೆಳೆದಾಗ, ಕಾಶೆಂಪೂರ್ ಸ್ಥಳದಲ್ಲೇ ಮೊಬೈಲ್ನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಸಂಪರ್ಕಿಸಿ, ಸ್ಪಷ್ಟೀಕರಣ ಬಯಸಿದರು.</p>.<p>‘ಬೀಜಕ್ಕೆ ಪಹಣಿ ಕಡ್ಡಾಯ ಮಾಡಿಲ್ಲ. ರೈತರು ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಬೀಜ ಪಡೆಯಬಹುದು’ ಎಂದು ಪಾಟೀಲ ತಿಳಿಸಿದರು.</p>.<p>‘ಬಳಿಕ ಕೃಷಿ ಇಲಾಖೆ ಆಯುಕ್ತರ ಕಚೇರಿ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದರು. ಬೀಜ ಖರೀದಿಗೆ ಪಹಣಿ ಕಡ್ಡಾಯಗೊಳಿಸಿಲ್ಲ. ಯಾವುದಾದರೊಂದು ಗುರುತಿನ ಚೀಟಿ ಪಡೆದು ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ: </strong>ರಿಯಾಯಿತಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಬೀದರ್ ತಾಲ್ಲೂಕಿನ ಕಮಠಾಣ ಹಾಗೂ ಮನ್ನಳ್ಳಿ ಗ್ರಾಮಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಗುರುವಾರ ಚಾಲನೆ ನೀಡಿದರು.</p>.<p>ರೈತರಿಗೆ ಗುಣಮಟ್ಟದ ಬೀಜ ವಿತರಿಸಬೇಕು. ಸೋಯಾಬೀನ್ ಸೇರಿದಂತೆ ಯಾವುದೇ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.</p>.<p>ಕೋವಿಡ್ ಕಾರಣ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದೊಂದು ಊರಿನ ರೈತರಿಗೆ ಒಂದೊಂದು ಸಮಯ ನಿಗದಿ ಮಾಡಿ ಬೀಜ ವಿತರಿಸಬೇಕು ಎಂದು ತಿಳಿಸಿದರು.</p>.<p>ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಬೀದರ್ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್, ಕೃಷಿ ಅಧಿಕಾರಿಗಳಾದ ಜಮಿರೊದ್ದಿನ್, ವಿಜಯಕುಮಾರ ಸಿರಂಜೆ ಇದ್ದರು.</p>.<p class="Briefhead"><strong>‘ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’</strong><br />‘ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಗೆ ಪಹಣಿ ಕಡ್ಡಾಯವಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.</p>.<p>‘ಬೀಜ ಖರೀದಿಗೆ ಪಹಣಿ ಬೇಕೇ ಬೇಕು ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರೈತರೊಬ್ಬರು ಗಮನ ಸೆಳೆದಾಗ, ಕಾಶೆಂಪೂರ್ ಸ್ಥಳದಲ್ಲೇ ಮೊಬೈಲ್ನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರನ್ನು ಸಂಪರ್ಕಿಸಿ, ಸ್ಪಷ್ಟೀಕರಣ ಬಯಸಿದರು.</p>.<p>‘ಬೀಜಕ್ಕೆ ಪಹಣಿ ಕಡ್ಡಾಯ ಮಾಡಿಲ್ಲ. ರೈತರು ಆಧಾರ್ ಕಾರ್ಡ್ ಅಥವಾ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಬೀಜ ಪಡೆಯಬಹುದು’ ಎಂದು ಪಾಟೀಲ ತಿಳಿಸಿದರು.</p>.<p>‘ಬಳಿಕ ಕೃಷಿ ಇಲಾಖೆ ಆಯುಕ್ತರ ಕಚೇರಿ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದರು. ಬೀಜ ಖರೀದಿಗೆ ಪಹಣಿ ಕಡ್ಡಾಯಗೊಳಿಸಿಲ್ಲ. ಯಾವುದಾದರೊಂದು ಗುರುತಿನ ಚೀಟಿ ಪಡೆದು ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>