‘ತೆಲಂಗಾಣದ ಕಮ್ಮಾರೆಡ್ಡಿ ಜಿಲ್ಲೆಯ ಸದಾಶಿವನಗರದ ರಾಮರೆಡ್ಡಿ ಚಿನ್ನದ ವ್ಯಾಪಾರಿ. ಆಗಾಗ ಹೈದರಾಬಾದ್ನಿಂದ ಮುಂಬೈಗೆ ಹೋಗಿ ಬಂಗಾರ ಖರೀದಿಸುತ್ತಾರೆ. ಶುಕ್ರವಾರ ಖಾಸಗಿ ಬಸ್ನಲ್ಲಿ ಹೈದರಾಬಾದ್ನಿಂದ ಮುಂಬೈಗೆ ಹೋಗುತ್ತಿದ್ದರು. ಬಸವಕಲ್ಯಾಣದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಪೆಟ್ರೋಲ್ ಬಂಕ್ನಲ್ಲಿ ಕೆಲಕಾಲ ಪ್ರಯಾಣಿಕರು ಶೌಚಾಲಯ ಬಳಸಲು ಬಸ್ ನಿಂತಿತ್ತು. ಅಲ್ಲಿಂದ ಕೂಗಳತೆ ದೂರದಲ್ಲಿ ಬಸ್ ತಡೆದ ಇಬ್ಬರು ಪೊಲೀಸ್ ಸಮವಸ್ತ್ರಧಾರಿಗಳು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿ ರಾಮರೆಡ್ಡಿ ಬಳಿ ಹೋಗಿದ್ದಾರೆ. ಅವರ ಬಳಿಯಿದ್ದ ನಗದು ₹80 ಸಾವಿರ ತೆಗೆದುಕೊಂಡು, ಠಾಣೆಯಲ್ಲಿ ಕೇಸ್ ಮಾಡಿದರೆ ಜೈಲು ಶಿಕ್ಷೆಯಾಗುತ್ತದೆ ಎಂದು ಹೆದರಿಸಿ ಹಣದೊಂದಿಗೆ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದ್ದಾರೆ.