ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಂತಿ ಕಡಿದು ಮಾವಿನ ಮರಗಳು ಭಸ್ಮ

Last Updated 21 ಜನವರಿ 2021, 11:15 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮದ ಚನ್ನಯ್ಯ ಸ್ವಾಮಿ ಮಠ ಅವರ ತೋಟದಲ್ಲಿ ಹೈವೋಲ್ಟ್ ವಿದ್ಯುತ್ ತಂತಿ ಕಡಿದು ಬಿದ್ದು 4 ಎಕರೆ ಮಾವಿನ ಮರಗಳು ಸುಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.

12 ಎಕರೆ ಭೂಮಿಯಲ್ಲಿ ಮಾವಿನ ಮರಗಳು ಬೆಳೆದಿದ್ದು ಸರ್ವೆ ನಂಬರ್‌ 119ರಲ್ಲಿ ಜೆಸ್ಕಾಂನ 90 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅವುಗಳಲ್ಲಿ ಕೆಲವು ಕಂಬಗಳ ತಂತಿ ಕಡಿದು ಬಿದ್ದಿದ್ದರಿಂದ 4 ಎಕರೆ ಮಾವಿನ ಮರಗಳು ಸುಟ್ಟು ಭಸ್ಮವಾಗಿದೆ.

ಹಾನಿ ಮೌಲ್ಯ ₹5 ಲಕ್ಷ ಎಂದು ಅಂದಾಜಿಸಲಾಗಿದೆ. ಸಕಾಲಕ್ಕೆ ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT