ಚಿಟಗುಪ್ಪ: ತಾಲ್ಲೂಕಿನ ಮುತ್ತಂಗಿ ಗ್ರಾಮದ ಚನ್ನಯ್ಯ ಸ್ವಾಮಿ ಮಠ ಅವರ ತೋಟದಲ್ಲಿ ಹೈವೋಲ್ಟ್ ವಿದ್ಯುತ್ ತಂತಿ ಕಡಿದು ಬಿದ್ದು 4 ಎಕರೆ ಮಾವಿನ ಮರಗಳು ಸುಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.
12 ಎಕರೆ ಭೂಮಿಯಲ್ಲಿ ಮಾವಿನ ಮರಗಳು ಬೆಳೆದಿದ್ದು ಸರ್ವೆ ನಂಬರ್ 119ರಲ್ಲಿ ಜೆಸ್ಕಾಂನ 90 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅವುಗಳಲ್ಲಿ ಕೆಲವು ಕಂಬಗಳ ತಂತಿ ಕಡಿದು ಬಿದ್ದಿದ್ದರಿಂದ 4 ಎಕರೆ ಮಾವಿನ ಮರಗಳು ಸುಟ್ಟು ಭಸ್ಮವಾಗಿದೆ.
ಹಾನಿ ಮೌಲ್ಯ ₹5 ಲಕ್ಷ ಎಂದು ಅಂದಾಜಿಸಲಾಗಿದೆ. ಸಕಾಲಕ್ಕೆ ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.