ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ವಿಜಯಕುಮಾರ ಸೋನಾರೆ ಮಾತನಾಡಿ, ‘ನಿಮಗೆ ಕೈ ಜೋಡಿಸುತ್ತೇವೆ. ಕನ್ನಡ ಕಲಿಯಿರಿ. ನಿಮಗೆ ಸಹಾಯ ಮಾಡುತ್ತೇವೆ. ಈ ಮೂಲಕ ಬೀದರ್ ಜಿಲ್ಲೆಯನ್ನು ಮಾದರಿ ಮಾಡೋಣ’ ಎಂದು ಮನವಿ ಮಾಡಿದರು.
ನಬಾರ್ಡನ ರಾಮರಾವ್, ಯುವ ಮುಖಂಡ ಶ್ರೀಮಂತ ಸಪಾಟೆ, ಬ್ಯಾಂಕ್ಗಳ ಮ್ಯಾನೇಜರ್ ಮತ್ತು ಸಿಬ್ಬಂದಿ ಇದ್ದರು.