ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಕರು ಹಾಗೂ ಪಾಲಕರು ಯಾವ ರೀತಿ ನೆರವಾಗಬೇಕು. ಪಠ್ಯಕ್ರಮ ಪುನರಾವರ್ತನೆ, ಓದಿನಲ್ಲಿ ಏಕಾಗ್ರತೆ, ಒತ್ತಡಮುಕ್ತಿ, ಆತ್ಮವಿಶ್ವಾಸ ಸೇರಿದಂತೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವ ಬಗೆಯನ್ನು ವಿದ್ಯಾರ್ಥಿಗಳು ಚಿತ್ರಗಳಲ್ಲೇ ಬಿಡಿಸಿದ್ದಾರೆ. ವಿಜೇತರಿಗೆ ಬಹುಮಾನ ರೂಪದಲ್ಲಿ ಪ್ರಧಾನಿ ಮೋದಿ ಅವರು ರಚಿಸಿರುವ ‘ಎಗ್ಝಾಂ ವಾರಿಯರ್ಸ್’ ಕೃತಿ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಹೇಳಿದ್ದಾರೆ.