<p>ಬಸವಕಲ್ಯಾಣ: ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಮದ್ಯ ಸೇರಿ ₹4.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.</p>.<p>ಕಲಬುರಗಿ ಜಿಲ್ಲೆಯ ಭೂಷಣ ಕುಪ್ಪಣ್ಣ ಬಿರಾದಾರ ಕುಬಮೋಳ, ಶಿವಶರಣ ಶಾಮರಾವ ಬಗದೂರೆ ಶರಣನಗರ ಹಾಗೂ ಶಿವಕುಮಾರ ದತ್ತಾತ್ರಿ ಮುಡಬಿ ಬಂಧಿತರು.</p>.<p>ಅಬಕಾರಿ ಉಪ ಆಯುಕ್ತ ಸಂಗನಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.</p>.<p>ಗೋವಾ ರಾಜ್ಯದಲ್ಲಿ ಮಾರಾಟ ಮಾಡಲಾಗುವ 37.620 ಲೀಟರ್ ಮದ್ಯ, ಕರ್ನಾಟಕದಲ್ಲಿ ಮಾರಾಟಕ್ಕಿರುವ 25.020 ಲೀಟರ್ ಮದ್ಯ ಹಾಗೂ 35.550 ಲೀಟರ್ ಬೀಯರ್, ಇವುಗಳ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಒಂದು ರಿಟಿಗಾ ಕಾರು ಹಾಗೂ ₹600 ನಗದು ಜಪ್ತಿ ಮಾಡಿಕೊಳ್ಳಲಾಗಿದೆ.</p>.<p>ಅಬಕಾರಿ ನಿರೀಕ್ಷಕ ರವೀಂದ್ರ ಪಾಟೀಲ, ನಾಗನಗೌಡ ಕೇರೂರ ಅವರು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದಾರೆ. ಆನಂದ ಉಕ್ಕಲಿ, ಸುರೇಶ ಶಂಕರ, ದಿಲೀಪಸಿಂಗ ಠಾಕೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಅಬಕಾರಿ ಇಲಾಖೆ ಅಧಿಕಾರಿಗಳು ಸೋಮವಾರ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಮದ್ಯ ಸೇರಿ ₹4.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.</p>.<p>ಕಲಬುರಗಿ ಜಿಲ್ಲೆಯ ಭೂಷಣ ಕುಪ್ಪಣ್ಣ ಬಿರಾದಾರ ಕುಬಮೋಳ, ಶಿವಶರಣ ಶಾಮರಾವ ಬಗದೂರೆ ಶರಣನಗರ ಹಾಗೂ ಶಿವಕುಮಾರ ದತ್ತಾತ್ರಿ ಮುಡಬಿ ಬಂಧಿತರು.</p>.<p>ಅಬಕಾರಿ ಉಪ ಆಯುಕ್ತ ಸಂಗನಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ.</p>.<p>ಗೋವಾ ರಾಜ್ಯದಲ್ಲಿ ಮಾರಾಟ ಮಾಡಲಾಗುವ 37.620 ಲೀಟರ್ ಮದ್ಯ, ಕರ್ನಾಟಕದಲ್ಲಿ ಮಾರಾಟಕ್ಕಿರುವ 25.020 ಲೀಟರ್ ಮದ್ಯ ಹಾಗೂ 35.550 ಲೀಟರ್ ಬೀಯರ್, ಇವುಗಳ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಒಂದು ರಿಟಿಗಾ ಕಾರು ಹಾಗೂ ₹600 ನಗದು ಜಪ್ತಿ ಮಾಡಿಕೊಳ್ಳಲಾಗಿದೆ.</p>.<p>ಅಬಕಾರಿ ನಿರೀಕ್ಷಕ ರವೀಂದ್ರ ಪಾಟೀಲ, ನಾಗನಗೌಡ ಕೇರೂರ ಅವರು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದಾರೆ. ಆನಂದ ಉಕ್ಕಲಿ, ಸುರೇಶ ಶಂಕರ, ದಿಲೀಪಸಿಂಗ ಠಾಕೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>