<p><strong>ಬೀದರ್</strong>: ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ತಾಲ್ಲೂಕಿನ ಚಿಟ್ಟಾ ಗ್ರಾಮದ ರೈತ ಪ್ರಭುರಾವ್ ಅವರ ಕುಟುಂಬದವರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಬುಧವಾರ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.</p>.<p>ದುರ್ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರದ ಆಶ್ವಾಸನೆ ನೀಡಿದ್ದೆ. ಅದರಂತೆ ಜೆಸ್ಕಾಂ ವತಿಯಿಂದ ಪರಿಹಾರ ಒದಗಿಸಲಾಗಿದೆ. ಈ ಪರಿಹಾರ ಧನವು ಸಂತ್ರಸ್ತ ಕುಟುಂಬದ ಸಂಕಷ್ಟದ ಸಮಯದಲ್ಲಿ ಸ್ವಲ್ಪ ಮಟ್ಟಿಗಾದರೂ ಆಸರೆಯಾಗಲಿ ಎಂದು ತಿಳಿಸಿದ್ದಾರೆ.</p>.<p>ಜೆಸ್ಕಾಂ ಅಧಿಕಾರಿಗಳಾದ ಪ್ರೇಮಕುಮಾರ್, ಅಬ್ದುಲ್ ಸೈಯದ್, ಮುಖಂಡರಾದ ರಾಜಕುಮಾರ್ ಪಾಟೀಲ, ವಿದ್ಯಾಸಾಗರ ಸ್ವಾಮಿ, ಆನಂದ ಪಾಟೀಲ, ಶಿವಕುಮಾರ್ ಪಾಟೀಲ, ಶರಣು ಸ್ವಾಮಿ, ಶಿವಕುಮಾರ್ ಕೆ., ಶಿವರಾಜ ಪಾಟೀಲ, ಸೋಮು ಪಾಟೀಲ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ತಾಲ್ಲೂಕಿನ ಚಿಟ್ಟಾ ಗ್ರಾಮದ ರೈತ ಪ್ರಭುರಾವ್ ಅವರ ಕುಟುಂಬದವರಿಗೆ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಬುಧವಾರ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದರು.</p>.<p>ದುರ್ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಹಾರದ ಆಶ್ವಾಸನೆ ನೀಡಿದ್ದೆ. ಅದರಂತೆ ಜೆಸ್ಕಾಂ ವತಿಯಿಂದ ಪರಿಹಾರ ಒದಗಿಸಲಾಗಿದೆ. ಈ ಪರಿಹಾರ ಧನವು ಸಂತ್ರಸ್ತ ಕುಟುಂಬದ ಸಂಕಷ್ಟದ ಸಮಯದಲ್ಲಿ ಸ್ವಲ್ಪ ಮಟ್ಟಿಗಾದರೂ ಆಸರೆಯಾಗಲಿ ಎಂದು ತಿಳಿಸಿದ್ದಾರೆ.</p>.<p>ಜೆಸ್ಕಾಂ ಅಧಿಕಾರಿಗಳಾದ ಪ್ರೇಮಕುಮಾರ್, ಅಬ್ದುಲ್ ಸೈಯದ್, ಮುಖಂಡರಾದ ರಾಜಕುಮಾರ್ ಪಾಟೀಲ, ವಿದ್ಯಾಸಾಗರ ಸ್ವಾಮಿ, ಆನಂದ ಪಾಟೀಲ, ಶಿವಕುಮಾರ್ ಪಾಟೀಲ, ಶರಣು ಸ್ವಾಮಿ, ಶಿವಕುಮಾರ್ ಕೆ., ಶಿವರಾಜ ಪಾಟೀಲ, ಸೋಮು ಪಾಟೀಲ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>