ಸತ್ಯಲೋಕ ಆಶ್ರಮದ ಸೇವಾಧಾರಿ ಅಂಬ್ರಿಶ್ ದಾಸ ಮಾತನಾಡಿ, ‘ತತ್ವದರ್ಶಿ ಸಂತ ರಾಮಪಾಲ್ ಮಹಾರಾಜರ ಸಂದೇಶ ಆಶ್ರಮದ ಮೂಲಕ ದೇಶದೆಲ್ಲೆಡೆ ಪ್ರಸಾರ ಮಾಡುತ್ತಿದ್ದು, ಲೋಕ ಕಲ್ಯಾಣ ಮೂಲ ಮಂತ್ರವಾಗಿದೆ, ಸಮಾಜದಲ್ಲಿಯ ಮೂಢ ನಂಬಿಕೆ, ಅಂಧಶ್ರದ್ಧೆ, ಅಜ್ಞಾನ ಕಳೆದು ಎಲ್ಲೆಡೆ ಸುಜ್ಞಾನ ಮೂಡಿಸುವ ಕಾರ್ಯ ಪ್ರವಚನ, ಪುಸ್ತಕಗಳ ಮೂಲಕ ನಡೆಯುತ್ತಿದೆ’ ಎಂದರು.