ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ವೃತ್ತಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಆಕರ್ಷಕವಾದ ಮಂಟಪಗಳನ್ನು ಸಿದ್ಧಪಡಿಸಿ, ವಾದ್ಯ ಮೇಳಗಳೊಂದಿಗೆ ಗಣೇಶನ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಒಯ್ದು ಕೂಡಿಸಲಾಗಿದೆ. ನಗರದ ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪಟೇಲ ಚೌಕ್, ಈಶ್ವರ ನಗರ, ಶಹಾಪುರ ಓಣಿ, ಜೈಶಂಕರ ಕಾಲೊನಿ, ಹಿರೇಮಠ ಕಾಲೊನಿ, ತ್ರಿಪುರಾಂತ, ಗೋಸಾಯಿ ಗಲ್ಲಿ, ಶಿವಾಜಿ ಚೌಕ್, ಕುಂಬಾರ ಪಾಳಿ, ಧರ್ಮಪ್ರಕಾಶ ಓಣಿ, ಬನಶಂಕರಿ ಗಲ್ಲಿ ಮತ್ತಿತರೆಡೆ ದೊಡ್ಡ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.