<p><strong>ಹುಮನಾಬಾದ್: </strong>ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕಲಬುರ್ಗಿಯ ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ತಂಡವು ಹುಮನಾಬಾದ್ನ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡದ ವಿರುದ್ಧ 98 ರನ್ಗಳ ಜಯ ಸಾಧಿಸಿತು.</p>.<p>ಇಲ್ಲಿಯ ಶ್ರೀ ಸಿದ್ಧರಾಜ ಟರ್ಫ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.</p>.<p>ಆರಂಭಿಕ ಆಟಗಾರ ಲಕ್ಷ್ಮಿಕಾಂತ ಸೂರ್ಯವಂಶಿ (71 ರನ್) ಅವರ ಅಮೋಘ ಆಟದ ಬಲದಿಂದ ಕೆಸಿಸಿ ಕಲಬುರ್ಗಿ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.</p>.<p>55 ಎಸೆತಗಳನ್ನು ಎದುರಿಸಿದ ಲಕ್ಷ್ಮಿಕಾಂತ ಅವರು ಆರು ಬೌಂಡರಿ, ಎರಡು ಸಿಕ್ಸರ್ ಸಿಡಿಸಿದರು. ನಂತರ ಬಂದ ಶ್ರೇಯಸ್ ಪುರಾಣಿಕ್ 26, ಭೀಮರಾವ್ ನವಲೆ 33 ಮತ್ತು ನಿತೀಶ್ ವಣಿಕಲ್ಯ 19 ರನ್ ಗಳಿಸಿದರು.</p>.<p>ಸಾಗರ್ ಕಾಶಿನಾಥ್, ಸುಮಿತ್ ಮತ್ತು ಮೊಹಮ್ಮದ್ ಅಫ್ತಾಬ್ ಅಹ್ಮದ್ ತಲಾ ಒಂದು ವಿಕೆಟ್ ಕಬಳಿಸಿದರು.</p>.<p>ಬೃಹತ್ ಗುರಿ ಬೆನ್ನತ್ತಿದ ಹುಮನಾಬಾದ್ ಸ್ಪೋರ್ಟ್ಸ್ ಅಕಾಡೆಮಿ ತಂಡವು ಸಿದ್ಧಾಂತ್ ನವಲೆ ಅವರ ಮಾರಕ್ ಬೌಲಿಂಗ್ ದಾಳಿಗೆ ತತ್ತರಿಸಿತು. ತಂಡವು 17.2 ಓವರ್ಗಳಲ್ಲಿ 88ರನ್ಗಳಿಗೆ ಆಲ್ ಔಟ್ ಆಯಿತು.</p>.<p>ತಂಡದ ನಾಯಕ ಸಮ್ಯಕ್ ಶಾ ಅವರು 37 ಎಸೆತಗಳಲ್ಲಿ 45 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಹೋರಾಟ ಮೂಡಿ ಬರಲಿಲ್ಲ. ಮೊಹಮ್ಮದ್ ಅಫ್ತಾಬ್ ಅಹ್ಮದ್ 10, ಸುಧನ್ವ ಮಣೂರ ಅವರು 6 ರನ್ ಗಳಿಸಿದರು.<br />ಸಿದ್ಧಾಂತ್ ನವಲೆ 20ಕ್ಕೆ 4, ವೆಂಕಟ್ ಸಾಯಿ 17ಕ್ಕೆ 2 ಮತ್ತು ರೋಹನ್ ಆರ್.ಸಿ., ಅವರು 25 ರನ್ ನೀಡಿ 2 ವಿಕೆಟ್ ಪಡೆದರು. ಸಿದ್ಧಾಂತ್ ನವಲೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.</p>.<p class="Subhead">ಜಿಸಿಸಿ ಕಲಬುರ್ಗಿಗೆ ಜಯ: ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ (ಜಿಸಿಸಿ) ಕಲಬುರ್ಗಿ ತಂಡವು ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ವಿಜಯಪುರ ತಂಡವನ್ನು 26 ರನ್ಗಳಿಂದ ಮಣಿಸಿತು.</p>.<p>ಮೊದಲು ಬ್ಯಾಟ್ ಮಾಡಿದ ಜಿಸಿಸಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು.<br />ತಂಡದ ನಾಯಕ ಕರಣ್ರಾಠೋಡ್ 39 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್, ಐದು ಬೌಂಡರಿಗಳು ಇದ್ದವು.</p>.<p>ಸನ್ಮಯ್ ಎ.ಆರ್. 25, ಮಾರುತಿ ಚವಾಣ್ 20, ಗಣೇಶ್ ಬಿ. 19 ರನ್ ಗಳಿಸಿದರು. ಬಾಬಗೌಡ 24ಕ್ಕೆ 2 ವಿಕೆಟ್ ಕಬಳಿಸಿದರು.</p>.<p>ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ ಕ್ರಿಕೆಟ್ ಕ್ಲಬ್ ವಿಜಯಪುರ ತಂಡಕ್ಕೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪ್ರತೀಕ್ ಚವಾಣ್ 56 ಎಸೆತಗಳಲ್ಲಿ 62 ರನ್ ಗಳಿಸಿದರೂ ಗೆಲುವು ಒಲಿಯಲಿಲ್ಲ. ಅಫ್ಫನ್ ಪಿ. 24 ರನ್ ಗಳಿಸಿದರು.</p>.<p>ರಾಠೋಡ್ ಕರಣ್ 17ಕ್ಕೆ 4, ಸಂತೋಷ್ ಹಟ್ಟಿ 30ಕ್ಕೆ 2 ಮತ್ತು ಅಮಿತ್ 4ರನ್ ನೀಡಿ ಒಂದು ವಿಕೆಟ್ ಪಡೆದರು.<br />ಕರಣ್ ರಾಠೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್: </strong>ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕಲಬುರ್ಗಿಯ ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ತಂಡವು ಹುಮನಾಬಾದ್ನ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡದ ವಿರುದ್ಧ 98 ರನ್ಗಳ ಜಯ ಸಾಧಿಸಿತು.</p>.<p>ಇಲ್ಲಿಯ ಶ್ರೀ ಸಿದ್ಧರಾಜ ಟರ್ಫ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.</p>.<p>ಆರಂಭಿಕ ಆಟಗಾರ ಲಕ್ಷ್ಮಿಕಾಂತ ಸೂರ್ಯವಂಶಿ (71 ರನ್) ಅವರ ಅಮೋಘ ಆಟದ ಬಲದಿಂದ ಕೆಸಿಸಿ ಕಲಬುರ್ಗಿ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.</p>.<p>55 ಎಸೆತಗಳನ್ನು ಎದುರಿಸಿದ ಲಕ್ಷ್ಮಿಕಾಂತ ಅವರು ಆರು ಬೌಂಡರಿ, ಎರಡು ಸಿಕ್ಸರ್ ಸಿಡಿಸಿದರು. ನಂತರ ಬಂದ ಶ್ರೇಯಸ್ ಪುರಾಣಿಕ್ 26, ಭೀಮರಾವ್ ನವಲೆ 33 ಮತ್ತು ನಿತೀಶ್ ವಣಿಕಲ್ಯ 19 ರನ್ ಗಳಿಸಿದರು.</p>.<p>ಸಾಗರ್ ಕಾಶಿನಾಥ್, ಸುಮಿತ್ ಮತ್ತು ಮೊಹಮ್ಮದ್ ಅಫ್ತಾಬ್ ಅಹ್ಮದ್ ತಲಾ ಒಂದು ವಿಕೆಟ್ ಕಬಳಿಸಿದರು.</p>.<p>ಬೃಹತ್ ಗುರಿ ಬೆನ್ನತ್ತಿದ ಹುಮನಾಬಾದ್ ಸ್ಪೋರ್ಟ್ಸ್ ಅಕಾಡೆಮಿ ತಂಡವು ಸಿದ್ಧಾಂತ್ ನವಲೆ ಅವರ ಮಾರಕ್ ಬೌಲಿಂಗ್ ದಾಳಿಗೆ ತತ್ತರಿಸಿತು. ತಂಡವು 17.2 ಓವರ್ಗಳಲ್ಲಿ 88ರನ್ಗಳಿಗೆ ಆಲ್ ಔಟ್ ಆಯಿತು.</p>.<p>ತಂಡದ ನಾಯಕ ಸಮ್ಯಕ್ ಶಾ ಅವರು 37 ಎಸೆತಗಳಲ್ಲಿ 45 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಹೋರಾಟ ಮೂಡಿ ಬರಲಿಲ್ಲ. ಮೊಹಮ್ಮದ್ ಅಫ್ತಾಬ್ ಅಹ್ಮದ್ 10, ಸುಧನ್ವ ಮಣೂರ ಅವರು 6 ರನ್ ಗಳಿಸಿದರು.<br />ಸಿದ್ಧಾಂತ್ ನವಲೆ 20ಕ್ಕೆ 4, ವೆಂಕಟ್ ಸಾಯಿ 17ಕ್ಕೆ 2 ಮತ್ತು ರೋಹನ್ ಆರ್.ಸಿ., ಅವರು 25 ರನ್ ನೀಡಿ 2 ವಿಕೆಟ್ ಪಡೆದರು. ಸಿದ್ಧಾಂತ್ ನವಲೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.</p>.<p class="Subhead">ಜಿಸಿಸಿ ಕಲಬುರ್ಗಿಗೆ ಜಯ: ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ (ಜಿಸಿಸಿ) ಕಲಬುರ್ಗಿ ತಂಡವು ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ವಿಜಯಪುರ ತಂಡವನ್ನು 26 ರನ್ಗಳಿಂದ ಮಣಿಸಿತು.</p>.<p>ಮೊದಲು ಬ್ಯಾಟ್ ಮಾಡಿದ ಜಿಸಿಸಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು.<br />ತಂಡದ ನಾಯಕ ಕರಣ್ರಾಠೋಡ್ 39 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್, ಐದು ಬೌಂಡರಿಗಳು ಇದ್ದವು.</p>.<p>ಸನ್ಮಯ್ ಎ.ಆರ್. 25, ಮಾರುತಿ ಚವಾಣ್ 20, ಗಣೇಶ್ ಬಿ. 19 ರನ್ ಗಳಿಸಿದರು. ಬಾಬಗೌಡ 24ಕ್ಕೆ 2 ವಿಕೆಟ್ ಕಬಳಿಸಿದರು.</p>.<p>ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ ಕ್ರಿಕೆಟ್ ಕ್ಲಬ್ ವಿಜಯಪುರ ತಂಡಕ್ಕೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪ್ರತೀಕ್ ಚವಾಣ್ 56 ಎಸೆತಗಳಲ್ಲಿ 62 ರನ್ ಗಳಿಸಿದರೂ ಗೆಲುವು ಒಲಿಯಲಿಲ್ಲ. ಅಫ್ಫನ್ ಪಿ. 24 ರನ್ ಗಳಿಸಿದರು.</p>.<p>ರಾಠೋಡ್ ಕರಣ್ 17ಕ್ಕೆ 4, ಸಂತೋಷ್ ಹಟ್ಟಿ 30ಕ್ಕೆ 2 ಮತ್ತು ಅಮಿತ್ 4ರನ್ ನೀಡಿ ಒಂದು ವಿಕೆಟ್ ಪಡೆದರು.<br />ಕರಣ್ ರಾಠೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>