ಬೀದರ್: ಜೇನು ಕೃಷಿಯಿಂದ ರೈತರು ಉತ್ತಮ ಆದಾಯ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ಸಂತೋಷಕುಮಾರ ಹೇಳಿದರು.
ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜೇನು ಹಲವು ವಿಧದಿಂದ ಉಪಕಾರಿಯಾಗಿದೆ. ಜೇನು ತುಪ್ಪ, ಜೇನು ಮೇಣ, ರಾಜಶಾಹಿರಸಗಳನ್ನು ನೇರವಾಗಿ ಮಾರಾಟ ಮಾಡಬಹುದು. ಪರಾಗ ಸ್ಪರ್ಶದಿಂದ ಬೆಳೆಗಳ ಅಧಿಕ ಇಳುವರಿ, ಜೈವಿಕ ಪರಿಸರ ನಿರ್ಮಾಣ ಮೊದಲಾದ ಪ್ರಯೋಜನಗಳು ಇವೆ ಎಂದು ತಿಳಿಸಿದರು.
ಬೆಂಗಳೂರಿನ ಎಂ.ಸಿ.ಕೆ.ಎಸ್. ಫೌಂಡೇಷನ್ನ ಲೋಕೇಶ, ತರಬೇತುದಾರ ಸುರೇಶ ಉಪಸ್ಥಿತರಿದ್ದರು.