ಗುಂಪಾ ರಿಂಗ್ರೋಡ್ ಸಮೀಪದ ಕಾಲಾ ಹನುಮಾನ, ಹೈದರಾಬಾದ್ ರಸ್ತೆ, ಜನವಾಡ ರಸ್ತೆಯ ಹನುಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ರಾಂಪೂರೆ ಕಾಲೊನಿಯಲ್ಲೂ ವಿಶೇಷ ಪೂಜೆ, ಪುನಸ್ಕಾರ ನಡೆದವು. ಮಾಜಿಶಾಸಕ ಅಶೋಕ ಖೇಣಿ ಅವರು ದೇವರ ದರ್ಶನ ಪಡೆದರು. ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಚಂದ್ರಶೇಖರ್ ಚನಶಟ್ಟಿ, ಧನರಾಜ ಹಂಗರಗಿ ಮತ್ತಿತರರು ಹಾಜರಿದ್ದರು.