ಅನ್ಯರ ಕಡೆ ಲಕ್ಷ್ಯವಿಟ್ಟು ಮಾಡಿದ ಊಟ ರುಚಿಸದು. ಪಚನವೂ ಆಗಲಾರದು. ಧನ ಗಳಿಸುವಲ್ಲಿಯೂ ಅನ್ಯರ ಕಡೆ ನೋಡದೆ, ತನಗೆ ದೇವರು ಉಂಡು, ಉಡಲು ಕೊಟ್ಟಿದ್ದಾನಲ್ಲವೆಂದು ಸಂತೋಷಿಸಬೇಕು. ಗಳಿಕೆಗೆ ಇತಿ ಮಿತಿಗಳಿಲ್ಲ. ಕಬೀರರು ದೇವರಲ್ಲಿ ಎಷ್ಟು ಧನ ಬೇಡಿದ್ದಾರೆ ಕೇಳಿ ಇಲ್ಲಿ.
"ಸಾಯಿ ಇತನಾ ದೀಜಿಯೇ ಜಾಮೇ ಕುಟುಂಬ ಸಮಾಯ!
ಮೈ ಭೀ ಭೂಕಾ ನ ರಂಹು ಸಾಧು ಭೂಖಾ ನ ಜಾಯ!!"
ನಾನು, ನನ್ನವರು ಮತ್ತು ಅತಿಥಿಯಾಗಿ ಬಂದವರು ಉಪವಾಸವಿರದಂತೆ ಕೊಡು ಸಾಕು ಎಂದಿದ್ದಾರೆ. ಆದ್ದರಿಂದ ಕಾಂಚಣ, ಕಾಮಿನಿ ಹಾಗೂ ಭೋಜನಗಳಲ್ಲಿ ತೃಪ್ತಿ ಬೇಗ ತಾಳುವುದು, ತನು ಮನಗಳಿಗೆ ಹಿತದಾಯಕವಾಗಿದೆ.