<p><strong>ಬೀದರ್</strong>: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಭಾನುವಾರ ಭಾರಿ ಮಳೆಯಾಗಿದೆ.</p><p>ಬಿರುಗಾಳಿ ಮಳೆಗೆ ಔರಾದ್ ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. </p><p>ಬೀದರ್ ನಗರ, ತಾಲ್ಲೂಕಿನ ಅಮಲಾಪುರ, ಕೊಳಾರ, ಚಿಕಪೇಟ್, ಬೆನಕನಳ್ಳಿ, ಹಿಪ್ಪಳಗಾಂವ, ಮರಕಲ್, ಶಹಾಪುರ, ಗೋರನಳ್ಳಿ, ಚಿಟ್ಟಾವಾಡಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ. </p><p>ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಉಡಬಾಳ, ಹುಮನಾಬಾದ್, ಭಾಲ್ಕಿ ತಾಲ್ಲೂಕಿನಲ್ಲೂ ವರ್ಷಧಾರೆಯಾಗಿದೆ. </p><p>ಸಂಜೆ 4ಗಂಟೆಗೆ ಶುರುವಾದ ಜೋರು ಮಳೆ ಎಡೆಬಿಡದೆ 5.30ರ ವರೆಗೆ ಸುರಿಯಿತು. ಬಳಿಕ ಗುಡುಗು ಮಿಂಚಿನೊಂದಿಗೆ ತುಂತುರು ಮಳೆ ಮುಂದುವರೆಯಿತು. ನಗರದ ಪ್ರಮುಖ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು.</p><p>ಔರಾದ್ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ 14 ಮಿ.ಮಿ, ಕೌಠಾ (ಬಿ) ಗ್ರಾಮದಲ್ಲಿ 8 ಮಿ.ಮೀ, ಭಾಲ್ಕಿ ತಾಲ್ಲೂಕಿನ ಜೋಳದಾಬಕದಲ್ಲಿ 20 ಮಿ.ಮೀ, ಡೋಂಗರಗಾಂವನಲ್ಲಿ 13 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ. </p><p>‘ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಆದರೆ, ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿರುವುದು ವರದಿಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.</p><p><strong>ಸಿಡಿಲಿಗೆ ಮೂರು ಜಾನುವಾರು ಸಾವು</strong></p><p> ಸಿಡಿಲಿನಿಂದ ಭಾಲ್ಕಿ ತಾಲ್ಲೂಕಿನಲ್ಲಿ ಮೂರು ಜಾನುವಾರುಗಳು ಭಾನುವಾರ ಮೃತಪಟ್ಟಿವೆ.</p><p>ಭಾಲ್ಕಿ ತಾಲ್ಲೂಕಿನ ರಕ್ಷಾಳ ( ಬಿ) ಗ್ರಾಮದಲ್ಲಿ ಸತ್ತಾರಮಿಯ್ಯಾ ಅವರಿಗೆ ಸೇರಿದ ಎರಡು, ಸಿಕಿಂದ್ರಬಾದ್ ಗ್ರಾಮದ ರೈತ ರಮೇಶ ಶಂಕ್ರೆಪ್ಪ ಅವರಿಗೆ ಸೇರಿದ ಒಂದು ಆಕಳು ಸಿಡಿಲಿಗೆ ಮೃತಪಟ್ಟಿವೆ. ಕೋಸಂ ಗ್ರಾಮದಲ್ಲಿ ಸಿಡಿಲಿನಿಂದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಉರಿದಿದೆ.</p><p>ಜಿಲ್ಲೆಯ ಬೀದರ್, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಸೇರಿದಂತೆ ಹಲವೆಡೆ ಸಂಜೆ ಆರಂಭಗೊಂಡ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ರಾತ್ರಿಯೂ ಮುಂದುವರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಭಾನುವಾರ ಭಾರಿ ಮಳೆಯಾಗಿದೆ.</p><p>ಬಿರುಗಾಳಿ ಮಳೆಗೆ ಔರಾದ್ ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. </p><p>ಬೀದರ್ ನಗರ, ತಾಲ್ಲೂಕಿನ ಅಮಲಾಪುರ, ಕೊಳಾರ, ಚಿಕಪೇಟ್, ಬೆನಕನಳ್ಳಿ, ಹಿಪ್ಪಳಗಾಂವ, ಮರಕಲ್, ಶಹಾಪುರ, ಗೋರನಳ್ಳಿ, ಚಿಟ್ಟಾವಾಡಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ. </p><p>ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಉಡಬಾಳ, ಹುಮನಾಬಾದ್, ಭಾಲ್ಕಿ ತಾಲ್ಲೂಕಿನಲ್ಲೂ ವರ್ಷಧಾರೆಯಾಗಿದೆ. </p><p>ಸಂಜೆ 4ಗಂಟೆಗೆ ಶುರುವಾದ ಜೋರು ಮಳೆ ಎಡೆಬಿಡದೆ 5.30ರ ವರೆಗೆ ಸುರಿಯಿತು. ಬಳಿಕ ಗುಡುಗು ಮಿಂಚಿನೊಂದಿಗೆ ತುಂತುರು ಮಳೆ ಮುಂದುವರೆಯಿತು. ನಗರದ ಪ್ರಮುಖ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು.</p><p>ಔರಾದ್ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ 14 ಮಿ.ಮಿ, ಕೌಠಾ (ಬಿ) ಗ್ರಾಮದಲ್ಲಿ 8 ಮಿ.ಮೀ, ಭಾಲ್ಕಿ ತಾಲ್ಲೂಕಿನ ಜೋಳದಾಬಕದಲ್ಲಿ 20 ಮಿ.ಮೀ, ಡೋಂಗರಗಾಂವನಲ್ಲಿ 13 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ. </p><p>‘ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಆದರೆ, ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿರುವುದು ವರದಿಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.</p><p><strong>ಸಿಡಿಲಿಗೆ ಮೂರು ಜಾನುವಾರು ಸಾವು</strong></p><p> ಸಿಡಿಲಿನಿಂದ ಭಾಲ್ಕಿ ತಾಲ್ಲೂಕಿನಲ್ಲಿ ಮೂರು ಜಾನುವಾರುಗಳು ಭಾನುವಾರ ಮೃತಪಟ್ಟಿವೆ.</p><p>ಭಾಲ್ಕಿ ತಾಲ್ಲೂಕಿನ ರಕ್ಷಾಳ ( ಬಿ) ಗ್ರಾಮದಲ್ಲಿ ಸತ್ತಾರಮಿಯ್ಯಾ ಅವರಿಗೆ ಸೇರಿದ ಎರಡು, ಸಿಕಿಂದ್ರಬಾದ್ ಗ್ರಾಮದ ರೈತ ರಮೇಶ ಶಂಕ್ರೆಪ್ಪ ಅವರಿಗೆ ಸೇರಿದ ಒಂದು ಆಕಳು ಸಿಡಿಲಿಗೆ ಮೃತಪಟ್ಟಿವೆ. ಕೋಸಂ ಗ್ರಾಮದಲ್ಲಿ ಸಿಡಿಲಿನಿಂದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಉರಿದಿದೆ.</p><p>ಜಿಲ್ಲೆಯ ಬೀದರ್, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಸೇರಿದಂತೆ ಹಲವೆಡೆ ಸಂಜೆ ಆರಂಭಗೊಂಡ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ರಾತ್ರಿಯೂ ಮುಂದುವರೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>