‘ಮಾಜಿ ಸಚಿವ ದಿವಂಗತ ಮಾಣಿಕರಾವ ಪಾಟೀಲ ಅವರು ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಕೆರೆಗಳ ನಿರ್ಮಿಸಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದೆ ಕೆಲ ಕೆರೆಗಳು ಅಳಿವಿನ ಅಂಚಿನಲ್ಲಿವೆ. ತೇಗಂಪುರ, ಔರಾದ್, ಬೆಳಕುಣಿ ಸೇರಿದಂತೆ ಕೆಲ ಕೆರೆಗಳು ತಾಲ್ಲೂಕಿನ ಜನರಿಗೆ ವರವಾಗಿ ಪರಿಣಮಿಸಿವೆ. ಜನರಿಗೆ ಕುಡಿಯುವ ನೀರಿನ ಜತೆ ನೂರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆಗಳಾಗಿವೆ’ ಎಂದು ಸಾರ್ವಜನಿಕರು ತಿಳಿಸಿದರು.