ಬೀದರ್: ಇಲ್ಲಿಯ ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಂದ ಟೀಂ ಯುವಾ ಸಹಯೋಗದೊಂದಿಗೆ ನಗರದಲ್ಲಿ ಪಾರಂಪರಿಕ ನಡಿಗೆ ನಡೆಯಿತು.
ಕೆಆರ್ಇ ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ, ಸದಸ್ಯ ಸಿದ್ಧರಾಜ ಪಾಟೀಲ ಹಾಗೂ ಪ್ರಾಚಾರ್ಯ ಮಲ್ಲಿಕಾರ್ಜುನ ಚಲ್ವಾ ಜಂಟಿಯಾಗಿ ನಡಿಗೆಗೆ ಚಾಲನೆ ನೀಡಿದರು.
ನಡಿಗೆ ಪ್ರಯುಕ್ತ ನೌಬಾದ್ ಹತ್ತಿರದ ಅಲಿಯಾಬಾದ್ನ ಸುರಂಗ ಬಾವಿ, ಮದರ್ ವೆಲ್ಗೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸುರಂಗ ಬಾವಿ ವ್ಯವಸ್ಥೆ ಕುರಿತು ಮಾಹಿತಿ ಕೊಡಲಾಯಿತು.
ಕಾಲೇಜಿನ ಉಪನ್ಯಾಸಕಿಯರಾದ ಲಕ್ಷ್ಮಿ ಎನ್. ಕುಂಬಾರ, ಡಾ. ಆಶಾ ಮುದ್ದಾ, ಡಾ. ದಿಲೀಪಕುಮಾರ, ಆನಂದ, ಐಸಿಐಸಿ ಸಹಾಯಕ ಸಂಯೋಜಕ ರಾಜಮೋಹನ್ ಪರದೇಶಿ, ಟೀಂ ಯುವಾ ಸಂಚಾಲಕ ವಿನಯ್ ಮಾಳಗೆ ಇದ್ದರು.