ವಚನ ಚಾರಿಟೆಬಲ್ ಅಧ್ಯಕ್ಷ ಶಿವಕುಮಾರ ಸಾಲಿ ಮತ್ತು ಸದಸ್ಯರು ನಗರದ ನೌಬಾದ್ ಶಿವನಗರ, ಮಡಿವಾಳ ವೃತ್ತ, ರೋಟರಿ ವೃತ್ತ, ಸಿದ್ಧಾರ್ಥ ಕಾಲೇಜು, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ವೃತ್ತ, ಶಾಪುರ ಗೇಟ್, ಮೈಲೂರ ಕ್ರಾಸ್, ಗಾಂಧಿ ಗಂಜ್, ಗುಂಪಾ ರಿಂಗ್ ರೋಡ್, ತೆಲಂಗಾಣ ಗಡಿ ಸೇರಿದಂತೆ ವಿವಿಧೆಡೆ ಕರ್ತವ್ಯದಲ್ಲಿ ನಿರತರಾದ ಪೊಲೀಸ್ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಹಾಗೂ ಸಿರಿಧಾನ್ಯ ಗಂಜಿ ವಿತರಿಸಿದರು.