ಬೀದರ್: ವಿಶ್ವ ಹೈಪಟೈಟಿಸ್ ದಿನಾಚರಣೆ ಅಂಗವಾಗಿ ನಗರದ ಡಾ. ಸಿ. ಆನಂದರಾವ್ ಅವರ ಆಸ್ಪತ್ರೆಯಲ್ಲಿ ಹೈಪಟೈಟಿಸ್ ಉಚಿತ ಪರೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಹೈಪಟೈಟಿಸ್ ಬಿ ವೈರಾಣುವಿನಿಂದ ಬರುವ ರೋಗವಾಗಿದೆ. ಇದು ಯಕೃತ್ತಿನ ಮೇಲೆ ದಾಳಿ ಮಾಡುತ್ತದೆ. ಹೈಪಟೈಟಿಸ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇದನ್ನು ಸುಲಭವಾಗಿ ತಡೆಯಬಹುದು ಎಂದು ಡಾ. ಸಿ. ಆನಂದರಾವ್ ತಿಳಿಸಿದರು.
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ, ಶಿಕ್ಷಕ ಸಂಜುಕುಮಾರ ಸ್ವಾಮಿ ಮಾತನಾಡಿದರು. ಅಕ್ಷಾ ವೆಲ್ಫೇರ್ ಸೊಸೈಟಿ ಅಧ್ಯಕ್ಷೆ ಸುನಿತಾ ಆನಂದ ಇದ್ದರು.