‘ಗ್ರಾಮದ ರೇವಣಪ್ಪ ಮದರಗಾಂವೆ ಹಾಗೂ ಶ್ರೀದೇವಿ ಎನ್ನುವವರು ತಗ್ಗಿನಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಅಧಿಕಾರಿಗಳು ಸದ್ಯ ಅಗೆದ ಬಹುತೇಕ ಗುಂಡಿಗಳನ್ನು ಪೈಪ್ ಹಾಕದೇ ತಾತ್ಕಾಲಿಕವಾಗಿ ಮುಚ್ಚಿಸಿದ್ದಾರೆ. ಇದರಿಂದ ಕಾಮಗಾರಿ ಮತ್ತೆ ನನೆಗುದಿಗೆ ಬೀಳಲಿದೆ’ ಎಂದು ಸೋಮನಾಥ, ಅಶೋಕ ಬೇಸರ ವ್ಯಕ್ತಪಡಿಸುತ್ತಾರೆ.