ಕೇರೂರು, ಸಿದ್ದೇಶ್ವರ, ಭಾಲ್ಕಿ ಪಟ್ಟಣದ ಭೀಮ ನಗರ ಏರಿಯಾ ಸೇರಿ ಸುಮಾರು 20 ಕಡೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ದೂರು ಬಂದಿವೆ. ತಕ್ಷಣವೇ ನೀರಿನ ಸಮಸ್ಯೆ ಬಗೆಹರಿಸಬೇಕು. ಟ್ಯಾಂಕರ್, ತೆರೆದ ಹಾಗೂ ಕೊಳವೆ ಬಾವಿ ಮೂಲಕ ಖಾಸಗಿಯಾಗಿ ನೀರು ನೀಡಿದ ಎಲ್ಲರಿಗೂ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೊನಾ ಕಾಲಿಟ್ಟಿದ್ದು, ಇದು ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪೂರ್ವ ಸಿದ್ಧತೆ ಇಲ್ಲದೇ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ ಪರಿಣಾಮ ಈ ಎಲ್ಲ ಅವಾಂತರಗಳು ನಡೆದಿವೆ. ಆದರೂ ಯಾರು ಭಯಪಡಬೇಕಿಲ್ಲ ಎಂದು ಹೇಳಿದರು.