ಭಾರತಕ್ಕೆ ಉದ್ಯೋಗಾಕಾಂಕ್ಷಿಗಳ ಅಗತ್ಯವಿಲ್ಲ. ನಮಗೆ ಉದ್ಯೋಗ ನೀಡುವವರು ಮತ್ತು ಉದ್ಯೋಗ ಸೃಷ್ಟಿಕರ್ತರು ಬೇಕು. ಭಾರತ ಸೂಪರ್ ಪವರ್ ಆಗಬೇಕಾದರೆ ಎಲ್ಲ ವಿಭಾಗಗಳಲ್ಲಿ ಚಿಂತಕರನ್ನು ಹುಟ್ಟು ಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ಈ ದೇಶದ ಗತವೈಭವವನ್ನು ಅದರ ಗುಣ, ನಾವೀನ್ಯತೆ ಮತ್ತು ಸಮಾಜ ಸೇವೆಗಳ ಮೂಲಕ ಪುನರುಜ್ಜೀವನಗೊಳಿಸುವ ಮತ್ತು ಮರು ಪಡೆಯುವ ಸಮಯ ಬಂದಿದೆ. ಸಮಾಜ ಮತ್ತು ಮಾನವೀಯತೆಯ ಪ್ರಯೋಜನಕ್ಕಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಧಾರೆ ಎರೆಯಬೇಕು ಎಂದು ಕರೆ ನೀಡಿದರು.