ರಂಗ ಮಂದಿರದಲ್ಲಿ ಬೊಮ್ಮಗೊಂಡೇಶ್ವರ ಕುರಿತು ವಿಶೇಷ ಉಪನ್ಯಾಸ, ಗೋಷ್ಠಿ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಿಂದ ಉತ್ಸವ ಸ್ಥಳದವರಿಗೆ ಬೊಮ್ಮಗೊಂಡೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದುಕೊಡಲಿವೆ ಎಂದು ತಿಳಿಸಿದರು.
ಗೊಂಡ ಸಮಾಜದ ಮುಖಂಡರಾದ ಭೀಮಸಿಂಗ್ ಮಲ್ಕಾಪುರ, ಲಕ್ಷ್ಮಣ ಮೇತ್ರೆ, ಆತ್ಮಾನಂದ ಬಂಬಳಗಿ, ಎಂ.ಪಿ. ವೈಜಿನಾಥ, ರವಿಕುಮಾರ ಸಿರ್ಸಿ, ಲಕ್ಷ್ಮಣ ಆಣದೂರುವಾಡಿ, ಸಚಿನ್ ಮಲ್ಕಾಪುರ, ವಿಷ್ಣು ಬೋಲಸೂರೆ, ಅಮೀತ್ ಸೋಲಪುರ, ನರಸಪ್ಪ ಯಾಕತಪುರ, ವಿಜಯಕುಮಾರ ಬ್ಯಾಲಹಳ್ಳಿ, ಶ್ರೀಕಾಂತ ಗೋರನಳ್ಳಿ ಮಾತನಾಡಿದರು.