‘ಬಸವಲಿಂಗ ಪಟ್ಟದ್ದೇವರು ಬಡವರು, ಅನಾಥ ಮಕ್ಕಳ ಸೇವೆಯಲ್ಲಿ ಬಸವಣ್ಣನವರನ್ನು ಕಾಣುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಅನ್ನ, ಅಕ್ಷರ, ಆಶ್ರಯ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಅದರಲ್ಲಿ ದಿವ್ಯಾಂಜಲಿ ಕೂಡ ಒಬ್ಬರಾಗಿದ್ದು, ಪಟ್ಟದ್ದೇವರ ಆಶೀರ್ವಾದಿಂದ ಉತ್ತಮ ಶಿಕ್ಷಣ, ಸಂಸ್ಕಾರ ಪಡೆದಿರುವ ದಿವ್ಯಾಂಜಲಿ ಕಲೆಯನ್ನು ಆರಾಧಿಸುತ್ತಿದ್ದಾಳೆ’ ಎಂದು ಹೇಳಿದರು.