ಹುಲಸೂರ: ಸರಿಯಾದ ಸಮಯಕ್ಕೆ ವೇತನ, ಗ್ರಾ.ಪಂ ವತಿಯಿಂದ ದಿನ ಪತ್ರಿಕೆಗಳ ಬಿಲ್ ಪಾವತಿ ಸಮಯಕ್ಕೆ ಸರಿಯಾಗಿ ಮಾಡಬೇಕು, ಗ್ರಂಥಪಾಲಕರನ್ನು ಇತರೆ ಕತ೯ವ್ಯಕ್ಕೆ ಬಳಸುವುದು ತಡೆಯಬೇಕು ಎಂಬುದನ್ನು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ಗ್ರಂಥಪಾಲಕರ ಸಂಘದ ವತಿಯಿಂದ ತಾ.ಪಂ ಇಒ ಅವರಿಗೆ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ್ ಶಿವಾನಂದ ಮೇತ್ರೆಯವ ಸಮ್ಮುಖದಲ್ಲಿ ತಾ.ಪಂ ಇಒ ಮಹಾದೇವ ಜಮ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಗ್ರಂಥಪಾಲಕರ ನೌಕರರ ಸಂಘ ಅಧ್ಯಕ್ಷ ಅಂಬರೀಶ ಮೇತ್ರೆ , ದಯಾನಂದ ಗಾಯಕವಾಡ, ಬಸವರಾಜ, ರಾಮಲಿಂಗ, ಬಲಭೀಮ ಇದ್ದರು.