`ಸಾಹಿತಿ, ಚಿಂತಕರ, ಗಣ್ಯರ ಜತೆಯಲ್ಲಿ ಹಲವಾರು ಸಲ ಸಭೆ ನಡೆಸಿ ಚಿಂತನ, ಮಂಥನ ನಡೆಸಿದ ನಂತರ ಈ ಅಭಿಯಾನ ರೂಪುಗೊಂಡಿದ್ದು ರಾಜ್ಯದಲ್ಲಿನ ಅನೇಕರು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸಾಣೆಹಳ್ಳಿ ಸ್ವಾಮೀಜಿಯವರ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ನಡೆಯಲು ಸಿದ್ಧರಾಗಿದ್ದಾರೆ. ಆದ್ದರಿಂದ ಕಲ್ಯಾಣ ನಾಡಿನವರಾದ ನಾವು ಯಾವುದೇ ರೀತಿಯಲ್ಲಿ ಹಿಂದೆ ಬೀಳುವುದು ಸರಿಯಲ್ಲ. ಇಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜಿಸಲು ಈಗೀನಿಂದಲೇ ಸಿದ್ಧರಾಗಬೇಕಾಗಿದೆ ಆದ್ದರಿಂದ ಪೂರ್ವಸಿದ್ಧತಾ ಸಭೆಯಲ್ಲಿ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ನೀಡಬೇಕು' ಎಂದಿದ್ದಾರೆ.