ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದೊಳಗಿನ ಗೊಂದಲದಿಂದ ಬಿಜೆಪಿ‌ ಮುಖಂಡರು ಬೇರೆಡೆ ಮುಖ: ಸಚಿವ ಕೃಷ್ಣ ಭೈರೇಗೌಡ

Published 24 ಆಗಸ್ಟ್ 2023, 11:02 IST
Last Updated 24 ಆಗಸ್ಟ್ 2023, 11:02 IST
ಅಕ್ಷರ ಗಾತ್ರ

ಬೀದರ್: 'ಬಿಜೆಪಿಯೊಳಗಿನ ಮುಖಂಡರು ಬೇರೆ ಕಡೆ ಮುಖ ಮಾಡಿರುವುದಕ್ಕೆ ಅವರ ಪಕ್ಷದಲ್ಲಿನ ಅವ್ಯವಸ್ಥೆ, ಗೊಂದಲವೇ ಕಾರಣ' ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಚುನಾವಣೆ ಮುಗಿದು ನೂರು ದಿನ ಕಳೆದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಆಗಿಲ್ಲ. ಅವರ ಪಕ್ಷದಲ್ಲಿ ಗೊಂದಲ ಉಂಟಾಗಿದೆ. ಅವರ ಪಕ್ಷದವರು ವಿಶ್ವಾಸ ಕಳೆದುಕೊಂಡು ಬೇರೆ ಕಡೆ ಮುಖ ಮಾಡಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದರು.

ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಜನ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ವಿರೋಧ ಪಕ್ಷದ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಎಂದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯ ಪಕ್ಷದಲ್ಲಿ ಚರ್ಚೆಯೇ ಆಗಿಲ್ಲ. ಬದಲಾವಣೆ ಆಗಬೇಕೋ ಬೇಡವೋ ಎನ್ನುವುದು ಪಕ್ಷದ ವರಿಷ್ಠರಿಗೆ ಬಿಟ್ಟದು ಎಂದರು.

ಸಚಿವರಾದ ಈಶ್ವರ ಬಿ.ಖಂಡ್ರೆ,‌ರಹೀಂ ಖಾನ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT