ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಈಶ್ವರ ಖಂಡ್ರೆ ಸೋಲು ಖಚಿತ: ಪ್ರಕಾಶ ಖಂಡ್ರೆ

Last Updated 28 ಫೆಬ್ರುವರಿ 2023, 4:50 IST
ಅಕ್ಷರ ಗಾತ್ರ

ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ಅವರ ಸೋಲು ಬರುವ ಚುನಾವಣೆಯಲ್ಲಿ ಖಚಿತ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ತಾಲ್ಲೂಕಿನ ಶ್ರೀಮಾಳಿ ಗ್ರಾಮದಲ್ಲಿ 2009-2010ರಲ್ಲಿ ಗ್ರಾಮದ ಕೆರೆ ಒಡೆದು ಬೆಳೆ ನಾಶವಾಗಿದ್ದ ರೈತರಿಗೆ ಸರ್ಕಾರದಿಂದ ಸುಮಾರು ₹4.75 ಕೋಟಿ ಪರಿಹಾರ ಕೊಡಿಸಿದ್ದಕ್ಕಾಗಿ ರೈತ ರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಫಲವತ್ತಾದ ಮಣ್ಣು, ಭೂಮಿಯನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿದ ರೈತರ ನೋವು ಶಾಸಕ ಈಶ್ವರ ಖಂಡ್ರೆ ಕಣ್ಣಿಗೆ ಕಂಡಿಲ್ಲವೇ. ಪರಿಹಾರ ಕೊಡಿಸಲು ಏಕೆ ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮತ್ತು ರಾಜೇಂದ್ರ ವರ್ಮಾ ಶಾಸಕರಿದ್ದ ಸಂದರ್ಭದಲ್ಲಿ ಮಾಡಿದ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. 2008 ರಿಂದ 2018 ರವರೆಗೆ ನಾನಾ ಕಾರಣಗಳಿಂದ ಬಿಜೆಪಿಯಲ್ಲಿ ಉಂಟಾಗಿದ್ದ ಒಡಕಿನಿಂದ ಈಶ್ವರ ಖಂಡ್ರೆ ಜಯ ಗಳಿಸಿದ್ದರು. ಈಗ ನಾವೆಲ್ಲರೂ ಸಂಕಲ್ಪ ಮಾಡಿದ್ದು, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಸೋಲು ಖಚಿತ ಎಂದು ಹೇಳಿದರು.

ಪ್ರಮುಖರಾದ ಡಿ.ಕೆ.ಸಿದ್ರಾಮ, ಶಿವರಾಜ ಗಂದಗೆ, ನಾಗನಾಥರಾವ್ ಬಗದುರೆ, ಅನಿಲ್ ಭುಸಾರೆ, ದಿನಕರ ಮೊರೆ, ಪಂಡಿತ ಶಿರೋಳೆ, ವೀರಣ್ಣ ಕಾರಬಾರಿ, ಅಣ್ಣಾರಾವ್ ಹಲಸೆ, ಸುಧಾಕಾರ ಸೂರ್ಯವಂಶಿ, ನವನಾಥ ಪಾಟೀಲ, ಮಧುಕರ ಗಂದಗೆ, ಪ್ರಶಾಂತ ಮೊರೆ, ಅಶೋಕ ಸೂರ್ಯವಂಶಿ, ಶಿವಕುಮಾರ ಧಬಾಲೆ, ಶಿವಾಜಿ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT