ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆಯಲ್ಲಿ 461ನೇ ರ‍್ಯಾಂಕ್‌ ಪಡೆದ ಮೊಹಮ್ಮದ್

ಬೀದರ್‌ ನಗರದ ಇಬ್ಬರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌
Last Updated 5 ಆಗಸ್ಟ್ 2020, 15:28 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಗರದ ಓಲ್ಡ್‌ಸಿಟಿಯ ಮೊಹಮ್ಮದ್ ನಜಿಮುದ್ದೀನ್ 461ನೇ ರ‍್ಯಾಂಕ್‌ ಹಾಗೂ ಮೊಹಮ್ಮದ್ ಕಮರುದ್ದೀನ್ 511ನೇ ರ‍್ಯಾಂಕ್‌ ಪಡೆದಿದ್ದಾರೆ.

ಮಹಮ್ಮದ್ ನಜಿಮುದ್ದೀನ್‌ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ 1ರಿಂದ 10ನೇ ತರಗತಿ ವರೆಗೆ ಓದಿದ್ದಾರೆ. ನಂತರ ಹೈದರಾಬಾದ್‌ನ ಚೈತನ್ಯ ಕಾಲೇಜಿನಲ್ಲಿ ಪಿಯು ಶಿಕ್ಷಣ, ಬೆಂಗಳೂರಿನ ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದಾರೆ.ಪ್ರಸ್ತುತ ನಾಗಪುರದ ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟರ್‌ನ ಇನ್‌ಕಂ ಟ್ಯಾಕ್ಸ್ ಕಚೇರಿಯಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೊಹಮ್ಮದ್ ಕಮರುದ್ದೀನ್ ಅವರಿಗೆ 511ನೇ ರ‍್ಯಾಂಕ್‌

ಬೀದರ್‌ನ ಪನ್ಸಾಲ್ ತಾಲೀಂನ ಮೊಹಮ್ಮದ್ ಕಮರುದ್ದೀನ್ ಫಿರೋಜುದ್ದೀನ್ ಖಾನ್ ಅವರು ಯುಪಿಎಸ್‌ಸಿಯಲ್ಲಿ 511ನೇ ರ‍್ಯಾಂಕ್‌ ಪಡೆದಿದ್ದಾರೆ.

ಬೀದರ್‌ನ (ಏರ್‌ಫೋರ್ಸ್‌) ಸ್ಕೂಲ್‌ನಲ್ಲಿ 1 ರಿಂದ 9ನೇ ತರಗತಿವರೆಗೆ ಓದಿದ್ದಾರೆ. ಗುರುನಾನಕ್ ಸ್ಕೂಲ್ನಲ್ಲಿ 10ನೇ ತರಗತಿ ಓದಿ ಪಾಸಾಗಿದ್ದಾರೆ. ಹೈದರಾಬಾದ್‌ನಲ್ಲಿ 12ನೇ ತರಗತಿ ಹಾಗೂ ಗೌಹಾಟಿಯ ಐಐಟಿನಲ್ಲಿ ಬಿಟೆಕ್ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ.

2014ರಲ್ಲಿ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾಗಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಅಸಿಸ್ಟಂಟ್ ಮಟಿರಿಯಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸನ್ಮಾನ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2019ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 461ನೇ ರ‍್ಯಾಂಕ್‌ ಪಡೆದ ಮೊಹಮ್ಮದ್ ನಜಿಮುದ್ದೀನ್ ಹಾಗೂ 511ನೇ ರ‍್ಯಾಂಕ್‌ ಪಡೆದ ಮೊಹಮ್ಮದ್ ಕಮರುದ್ದೀನ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ್‌ ಶ್ರೀಧರ ಹಾಗೂ ರ‍್ಯಾಂಕ್‌ ಪಡೆದ ಅಭ್ಯರ್ಥಿಗಳ ಪಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT