<p><strong>ಖಟಕಚಿಂಚೋಳಿ</strong>: ‘ಮನುಷ್ಯ ಪಾಪದಿಂದ ಮುಕ್ತಿ ಹೊಂದಲು ತ್ರಿವಿಧ ತಪಸ್ಸು ಅವಶ್ಯಕ’ ಎಂದು ಬೀದರ್ನ ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಚಳಕಾಪುರ ಗ್ರಾಮದಲ್ಲಿ ಸಿದ್ಧಾರೂಢರ ಜಯಂತ್ಯುತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದ ಐದನೇ ದಿನ ‘ತ್ರಿವಿಧ ತಪ’ ವಿಷಯದ ಬಗ್ಗೆ ಮಾತನಾಡಿದರು.</p>.<p>ತ್ರಿವಿಧ ತಪವೆಂದರೆ ಶಾರೀರಿಕ, ಮಾನಸಿಕ ಹಾಗೂ ವಾಣಿ ಎಂದರ್ಥ. ಬೇರೆಯವರ ಬಗ್ಗೆ ಕೆಟ್ಟದ್ದನ್ನು ಆಲೋಚನೆ ಮಾಡದೇ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಬೇರೆಯವರ ಜತೆ ಕಪಟದಿಂದ ವ್ಯವಹರಿಸದಿರುವುದು ಮಾನಸಿಕ ತಪಸ್ಸು ಎಂದು ಹೇಳಿದರು.</p>.<p>ಸದಾ ಶುಚಿತ್ವದಿಂದ ದೇವರ ಧ್ಯಾನ ಮಾಡುವುದು. ಅಹಿಂಸೆಯನ್ನು ಪಾಲಿಸುವುದು ಶಾರೀರಿಕ ತಪಸ್ಸಾಗಿದೆ. ಇತರರಿಗೆ ನೋವುಂಟಾಗುವಂತೆ ಮಾತನಾಡದೇ ಹಿತವಾದದ್ದನ್ನು ಹಾಗೂ ಸತ್ಯವನ್ನೇ ಹೇಳುವುದೇ ವಾಚಕ ತಪಸ್ಸಾಗಿದೆ ಎಂದು ತಿಳಿಸಿದರು.</p>.<p>ಮುಚಳಂಬದ ಪ್ರಣವಾನಂದ ಸ್ವಾಮೀಜಿ ಮಾತನಾಡಿ,‘ತಪಸ್ಸು ಮಾಡುವುದರಿಂದ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು’ ಎಂದರು.</p>.<p>ಸೈದಾಪುರದ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ,‘ಮಾನವ ಮತ್ತು ಪ್ರಾಣಿಗಳಿಗೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಊಟ, ನಿದ್ರೆ , ಭಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ. ಆದರೆ ಧರ್ಮ ತಪಸ್ಸು ಮನುಷ್ಯ ಮಾತ್ರ ಮಾಡಲು ಸಾಧ್ಯ. ಅದು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತದೆ’ ಎಂದು ತಿಳಿಸಿದರು.</p>.<p>ಕಲಬುರಗಿಯ ಲಕ್ಷ್ಮೀತಾಯಿ, ಜಡಿಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ ಹಾಗೂ ಸುಶಾಂತ ತಾಯಿ ಇದ್ದರು.</p>.<p>ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ, ಹಲಬರ್ಗಾ, ಕಣಜಿ ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಜನರು ಸಿದ್ಧಾರೂಢರ ಜಯಂತ್ಯುತ್ಸವದಲ್ಲಿ ಭಾಗಿಯಾಗಲು ಪಾದಯಾತ್ರೆ ಮೂಲಕ ಚಳಕಾಪುರಕ್ಕೆ ಬಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಟಕಚಿಂಚೋಳಿ</strong>: ‘ಮನುಷ್ಯ ಪಾಪದಿಂದ ಮುಕ್ತಿ ಹೊಂದಲು ತ್ರಿವಿಧ ತಪಸ್ಸು ಅವಶ್ಯಕ’ ಎಂದು ಬೀದರ್ನ ಸಿದ್ಧಾರೂಢ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಚಳಕಾಪುರ ಗ್ರಾಮದಲ್ಲಿ ಸಿದ್ಧಾರೂಢರ ಜಯಂತ್ಯುತ್ಸವದ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದ ಐದನೇ ದಿನ ‘ತ್ರಿವಿಧ ತಪ’ ವಿಷಯದ ಬಗ್ಗೆ ಮಾತನಾಡಿದರು.</p>.<p>ತ್ರಿವಿಧ ತಪವೆಂದರೆ ಶಾರೀರಿಕ, ಮಾನಸಿಕ ಹಾಗೂ ವಾಣಿ ಎಂದರ್ಥ. ಬೇರೆಯವರ ಬಗ್ಗೆ ಕೆಟ್ಟದ್ದನ್ನು ಆಲೋಚನೆ ಮಾಡದೇ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಬೇರೆಯವರ ಜತೆ ಕಪಟದಿಂದ ವ್ಯವಹರಿಸದಿರುವುದು ಮಾನಸಿಕ ತಪಸ್ಸು ಎಂದು ಹೇಳಿದರು.</p>.<p>ಸದಾ ಶುಚಿತ್ವದಿಂದ ದೇವರ ಧ್ಯಾನ ಮಾಡುವುದು. ಅಹಿಂಸೆಯನ್ನು ಪಾಲಿಸುವುದು ಶಾರೀರಿಕ ತಪಸ್ಸಾಗಿದೆ. ಇತರರಿಗೆ ನೋವುಂಟಾಗುವಂತೆ ಮಾತನಾಡದೇ ಹಿತವಾದದ್ದನ್ನು ಹಾಗೂ ಸತ್ಯವನ್ನೇ ಹೇಳುವುದೇ ವಾಚಕ ತಪಸ್ಸಾಗಿದೆ ಎಂದು ತಿಳಿಸಿದರು.</p>.<p>ಮುಚಳಂಬದ ಪ್ರಣವಾನಂದ ಸ್ವಾಮೀಜಿ ಮಾತನಾಡಿ,‘ತಪಸ್ಸು ಮಾಡುವುದರಿಂದ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು’ ಎಂದರು.</p>.<p>ಸೈದಾಪುರದ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿ,‘ಮಾನವ ಮತ್ತು ಪ್ರಾಣಿಗಳಿಗೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಊಟ, ನಿದ್ರೆ , ಭಯ ಎಲ್ಲವೂ ಒಂದೇ ರೀತಿಯಾಗಿರುತ್ತದೆ. ಆದರೆ ಧರ್ಮ ತಪಸ್ಸು ಮನುಷ್ಯ ಮಾತ್ರ ಮಾಡಲು ಸಾಧ್ಯ. ಅದು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತದೆ’ ಎಂದು ತಿಳಿಸಿದರು.</p>.<p>ಕಲಬುರಗಿಯ ಲಕ್ಷ್ಮೀತಾಯಿ, ಜಡಿಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ ಹಾಗೂ ಸುಶಾಂತ ತಾಯಿ ಇದ್ದರು.</p>.<p>ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ, ಹಲಬರ್ಗಾ, ಕಣಜಿ ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಜನರು ಸಿದ್ಧಾರೂಢರ ಜಯಂತ್ಯುತ್ಸವದಲ್ಲಿ ಭಾಗಿಯಾಗಲು ಪಾದಯಾತ್ರೆ ಮೂಲಕ ಚಳಕಾಪುರಕ್ಕೆ ಬಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>