ತೊಗರಿಯಲ್ಲಿ ನೆಟೆ ರೋಗ ಕಂಡುಬಂದಲ್ಲಿ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಚೆನ್ನಾಗಿ ಇರುವ ಬೆಳೆಗೆ ಪ್ರತಿ ಲೀಟರ್ ನೀರಿಗೆ ಕಾರ್ಬನ್ ಡೈಜಿಮ್ 50 ಡಬ್ಲ್ಯೂಪಿ 2 ಗ್ರಾಂ ಅಥವಾ ಸಂಯುಕ್ತ ಶಿಲಿಂಧ್ರನಾಶಕ (ಕಾರ್ಬನ್ ಡೈಜಿಮ್+ ಮ್ಯಾಕೋಜೆಬ್) 2 ಗ್ರಾಂ ಬೆರೆಸಿ ಬಾಧಿತ ಗಿಡಗಳ ಕಾಂಡ ಹಾಗೂ ಸುತ್ತಮುತ್ತಲಿನ ಕಾಂಡಗಳಿಗೆ ಸಿಂಪಡಿಸಬೇಕು. ದ್ರಾವಣ ಬುಡಕ್ಕೆ ಬೀಳದಂತೆ ನೋಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ತಿಳಿಸಿದರು. ರೋಗದ ತೀವ್ರತೆ ಹೆಚ್ಚಿರುವ ಪ್ರದೇಶದಲ್ಲಿ ಏಕದಳ, ದ್ವಿದಳ ಧಾನ್ಯಗಳಾದ ಜೋಳ, ಮೆಕ್ಕೆ ಜೋಳ, ಸಜ್ಜೆ ಜೋಳ, ಸಜ್ಜೆ ಬೆಳೆಗಳನ್ನು ಎರಡು, ಮೂರು ವರ್ಷ ಪರಿವರ್ತಿಸಬೇಕು. ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬೇಕು ಎಂದು ಸಲಹೆ ನೀಡಿದರು.