<p><strong>ಬೀದರ್</strong>: ಮಹಾನವಮಿ, ವಿಜಯ ದಶಮಿ ಹಾಗೂ ಸೀಗೆ ಹುಣ್ಣಿಮೆ ಈಚೆಗಷ್ಟೇ ಮುಗಿದಿವೆ. ಹೀಗಾಗಿ ಬಹುತೇಕ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಗ್ರಾಹಕರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.</p>.<p>ನಗರದ ಮಾರುಕಟ್ಟೆಗೆ ಕಳೆದ ವಾರ ಖಾಟು ಹೆಚ್ಚಿಸಿದ್ದ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಸ್ವಲ್ಪ ತಣ್ಣಗಾಗಿವೆ. ಈರುಳ್ಳಿ ಗುಣಮಟ್ಟದ ಆಧಾರದ ಮೇಲೆ ಮೂರು ಬೆಲೆಗಳಲ್ಲಿ ಮಾರಾಟವಾಗುತ್ತಿದೆ. ತರಕಾರಿ ವ್ಯಾಪಾರಿಗಳು ಟಾಟಾ ಏಸ್ ಹಾಗೂ ಕೈಗಾಡಿಗಳಲ್ಲಿ ಓಣಿ ಓಣಿಗಳಲ್ಲಿ ಸಂಚರಿಸಿ ₹ 100ಗೆ ನಾಲ್ಕು ಕೆಜಿ ಸಣ್ಣ ಗಾತ್ರದ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.</p>.<p>ಹಿಂದಿನ ವಾರ ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಟೊಮೆಟೊ ಬೆಳೆ ಕೊಚ್ಚಿ ಹೋಗಿತ್ತು. ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗದ ಕಾರಣ ಟೊಮೆಟೊ ಬೆಲೆಯಲ್ಲೂ ಹೆಚ್ಚಳವಾಗಿತ್ತು. ಇದೀಗ ಟೊಮೆಟೊ ಬೆಲೆ ಸಹಜ ಸ್ಥಿತಿಗೆ ಮರಳಿದೆ.</p>.<p>ಪ್ರತಿ ಕ್ವಿಂಟಲ್ಗೆ ಹಸಿ ಮೆಣಸಿನಕಾಯಿ, ಟೊಮೆಟೊ ₹ 2 ಸಾವಿರ, ಗಜ್ಜರಿ, ಬೀಟ್ರೂಟ್ ₹ 1 ಸಾವಿರ, ಈರುಳ್ಳಿ, ಬೀನ್ಸ್, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಮೆಂತೆ ಸೊಪ್ಪು ಹಾಗೂ ಕೊತಂಬರಿ ಬೆಲೆ ₹500 ಇಳಿದಿದೆ.</p>.<p>ಈ ವಾರ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 1 ಸಾವಿರ ಹೆಚ್ಚಾಗಿದೆ. ಎಲೆಕೋಸು, ಸಬ್ಬಸಗಿ ಹಾಗೂ ಪಾಲಕ್ ಬೆಲೆ ₹ 500 ಏರಿಕೆಯಾಗಿದೆ. ಆಲೂಗಡ್ಡೆ, ಬೆಳ್ಳುಳ್ಳಿ, ಹಿರೇಕಾಯಿ, ಹೂಕೋಸು ಹಾಗೂ ಕರಿಬೇವು ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ.</p>.<p>ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಬಂದಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಆವಕವಾಗಿದೆ. ತೆಲಂಗಾಣದ ಜಿಲ್ಲೆಗಳಿಂದ ನುಗ್ಗೆಕಾಯಿ, ಹಿರೇಕಾಯಿ, ಚವಳೆಕಾಯಿ, ಹಾಗಲಕಾಯಿ, ಸೋರೆಕಾಯಿ ಬಂದಿದೆ.</p>.<p>‘ಮಾರುಕಟ್ಟೆಯಲ್ಲಿ ಈ ವಾರ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನೆಮ್ಮದಿಯಿಂದ ತರಕಾರಿ ಕೊಂಡುಕೊಳ್ಳಲು ಸಾಧ್ಯವಾಗಿದೆ. ಆದರೆ, ದೀಪಾವಳಿ ವೇಳೆಗೆ ತರಕಾರಿ ಬೆಲೆ ಮತ್ತೆ ಹೆಚ್ಚಳವಾದರೆ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.<br />..................................................................<br />ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ<br />........................................................................<br />ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ<br />........................................................................<br />ಈರುಳ್ಳಿ 40-50,40-45<br />ಮೆಣಸಿನಕಾಯಿ 40-50,25-30<br />ಆಲೂಗಡ್ಡೆ 40-50,35-40<br />ಎಲೆಕೋಸು 30-40,40-50<br />ಬೆಳ್ಳುಳ್ಳಿ 80-90,85-90<br />ಗಜ್ಜರಿ 40-50,35-40<br />ಬೀನ್ಸ್ 130-140,130-135<br />ಬದನೆಕಾಯಿ 40-50,40-45<br />ಮೆಂತೆ ಸೊಪ್ಪು 40-50, 40-45<br />ಹೂಕೋಸು 40-50, 40-50<br />ಸಬ್ಬಸಗಿ 35-40, 40-45<br />ಬೀಟ್ರೂಟ್ 50-60, 40-50<br />ತೊಂಡೆಕಾಯಿ 30-40,30-35<br />ಕರಿಬೇವು 20-30,25-30<br />ಕೊತಂಬರಿ 30-40,30-35<br />ಟೊಮೆಟೊ 60-70,40-50<br />ಪಾಲಕ್ 30-40, 40-45<br />ಬೆಂಡೆಕಾಯಿ 40-45 ,40-50<br />ಹಿರೇಕಾಯಿ 40-50,45-50<br />ನುಗ್ಗೆಕಾಯಿ 80-90, 90-100</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಮಹಾನವಮಿ, ವಿಜಯ ದಶಮಿ ಹಾಗೂ ಸೀಗೆ ಹುಣ್ಣಿಮೆ ಈಚೆಗಷ್ಟೇ ಮುಗಿದಿವೆ. ಹೀಗಾಗಿ ಬಹುತೇಕ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಗ್ರಾಹಕರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.</p>.<p>ನಗರದ ಮಾರುಕಟ್ಟೆಗೆ ಕಳೆದ ವಾರ ಖಾಟು ಹೆಚ್ಚಿಸಿದ್ದ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಸ್ವಲ್ಪ ತಣ್ಣಗಾಗಿವೆ. ಈರುಳ್ಳಿ ಗುಣಮಟ್ಟದ ಆಧಾರದ ಮೇಲೆ ಮೂರು ಬೆಲೆಗಳಲ್ಲಿ ಮಾರಾಟವಾಗುತ್ತಿದೆ. ತರಕಾರಿ ವ್ಯಾಪಾರಿಗಳು ಟಾಟಾ ಏಸ್ ಹಾಗೂ ಕೈಗಾಡಿಗಳಲ್ಲಿ ಓಣಿ ಓಣಿಗಳಲ್ಲಿ ಸಂಚರಿಸಿ ₹ 100ಗೆ ನಾಲ್ಕು ಕೆಜಿ ಸಣ್ಣ ಗಾತ್ರದ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.</p>.<p>ಹಿಂದಿನ ವಾರ ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಟೊಮೆಟೊ ಬೆಳೆ ಕೊಚ್ಚಿ ಹೋಗಿತ್ತು. ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗದ ಕಾರಣ ಟೊಮೆಟೊ ಬೆಲೆಯಲ್ಲೂ ಹೆಚ್ಚಳವಾಗಿತ್ತು. ಇದೀಗ ಟೊಮೆಟೊ ಬೆಲೆ ಸಹಜ ಸ್ಥಿತಿಗೆ ಮರಳಿದೆ.</p>.<p>ಪ್ರತಿ ಕ್ವಿಂಟಲ್ಗೆ ಹಸಿ ಮೆಣಸಿನಕಾಯಿ, ಟೊಮೆಟೊ ₹ 2 ಸಾವಿರ, ಗಜ್ಜರಿ, ಬೀಟ್ರೂಟ್ ₹ 1 ಸಾವಿರ, ಈರುಳ್ಳಿ, ಬೀನ್ಸ್, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಮೆಂತೆ ಸೊಪ್ಪು ಹಾಗೂ ಕೊತಂಬರಿ ಬೆಲೆ ₹500 ಇಳಿದಿದೆ.</p>.<p>ಈ ವಾರ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 1 ಸಾವಿರ ಹೆಚ್ಚಾಗಿದೆ. ಎಲೆಕೋಸು, ಸಬ್ಬಸಗಿ ಹಾಗೂ ಪಾಲಕ್ ಬೆಲೆ ₹ 500 ಏರಿಕೆಯಾಗಿದೆ. ಆಲೂಗಡ್ಡೆ, ಬೆಳ್ಳುಳ್ಳಿ, ಹಿರೇಕಾಯಿ, ಹೂಕೋಸು ಹಾಗೂ ಕರಿಬೇವು ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ.</p>.<p>ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಬಂದಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಆವಕವಾಗಿದೆ. ತೆಲಂಗಾಣದ ಜಿಲ್ಲೆಗಳಿಂದ ನುಗ್ಗೆಕಾಯಿ, ಹಿರೇಕಾಯಿ, ಚವಳೆಕಾಯಿ, ಹಾಗಲಕಾಯಿ, ಸೋರೆಕಾಯಿ ಬಂದಿದೆ.</p>.<p>‘ಮಾರುಕಟ್ಟೆಯಲ್ಲಿ ಈ ವಾರ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನೆಮ್ಮದಿಯಿಂದ ತರಕಾರಿ ಕೊಂಡುಕೊಳ್ಳಲು ಸಾಧ್ಯವಾಗಿದೆ. ಆದರೆ, ದೀಪಾವಳಿ ವೇಳೆಗೆ ತರಕಾರಿ ಬೆಲೆ ಮತ್ತೆ ಹೆಚ್ಚಳವಾದರೆ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.<br />..................................................................<br />ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ<br />........................................................................<br />ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ<br />........................................................................<br />ಈರುಳ್ಳಿ 40-50,40-45<br />ಮೆಣಸಿನಕಾಯಿ 40-50,25-30<br />ಆಲೂಗಡ್ಡೆ 40-50,35-40<br />ಎಲೆಕೋಸು 30-40,40-50<br />ಬೆಳ್ಳುಳ್ಳಿ 80-90,85-90<br />ಗಜ್ಜರಿ 40-50,35-40<br />ಬೀನ್ಸ್ 130-140,130-135<br />ಬದನೆಕಾಯಿ 40-50,40-45<br />ಮೆಂತೆ ಸೊಪ್ಪು 40-50, 40-45<br />ಹೂಕೋಸು 40-50, 40-50<br />ಸಬ್ಬಸಗಿ 35-40, 40-45<br />ಬೀಟ್ರೂಟ್ 50-60, 40-50<br />ತೊಂಡೆಕಾಯಿ 30-40,30-35<br />ಕರಿಬೇವು 20-30,25-30<br />ಕೊತಂಬರಿ 30-40,30-35<br />ಟೊಮೆಟೊ 60-70,40-50<br />ಪಾಲಕ್ 30-40, 40-45<br />ಬೆಂಡೆಕಾಯಿ 40-45 ,40-50<br />ಹಿರೇಕಾಯಿ 40-50,45-50<br />ನುಗ್ಗೆಕಾಯಿ 80-90, 90-100</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>