<p><strong>ಬೀದರ್: </strong>‘ಮಕ್ಕಳು ಉಪದೇಶಕ್ಕಿಂತ ಪಾಲಕರ ಆಚರಣೆಯನ್ನು ಅನುಕರಿಸುತ್ತಾರೆ. ಮಕ್ಕಳಲ್ಲಿ ಬದಲಾವಣೆ ಕಾಣುವ ಮೊದಲು ಪಾಲಕರು ಬದಲಾಗಬೇಕು’ ಎಂದು ಚಿಂತಕಿ ಲೀಲಾ ಕಾರಟಗಿ ಸಲಹೆ ನೀಡಿದರು.</p>.<p>ಇಲ್ಲಿಯ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ‘ಮಕ್ಕಳ ಸಾತ್ವಿಕ ಬೆಳವಣಿಗೆ– ಪಾಲಕರ ಜವಾಬ್ದಾರಿ’ ಕುರಿತ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪಾಲಕರು ಆದರ್ಶದ ಬದುಕು ಕಟ್ಟಿಕೊಂಡರೆ ಮಕ್ಕಳು ಸಹಜವಾಗಿ ಆದರ್ಶದ ಮಾರ್ಗದಲ್ಲಿ ಸಾಗುತ್ತಾರೆ. ಮಕ್ಕಳು ಎಂಥವರ ಸಹವಾಸದಲ್ಲಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕು’ ಎಂದು ಹೇಳಿದರು.</p>.<p>‘ಪಾಲಕರು ನೈತಿಕ ಮಾರ್ಗದಲ್ಲಿ ಸಾಗದಿದ್ದರೆ ಮಕ್ಕಳು ನೈತಿಕ ಬೆಳವಣಿಗೆಯ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗದು. ಶಿಕ್ಷಣದ ಪ್ರಮಾಣಪತ್ರ ಕೊಡುವ ಕಾಲೇಜುಗಳು ಇವೆ. ಮನುಷ್ಯತ್ವ ಹೇಳಿಕೊಡುವ ಕಾಲೇಜುಗಳು ಅಸ್ತಿತ್ವಕ್ಕೆ ಬಂದಿಲ್ಲ. ಶ್ರೇಷ್ಠ ಸಂಸ್ಕಾರ ಇರುವ ದೇಶದಲ್ಲಿ ಪಾಲಕರ ಹೊಣೆ ಅಧಿಕ ಇದೆ’ ಎಂದು ತಿಳಿಸಿದರು.</p>.<p>‘ವಿದ್ಯೆ ಭರವಸೆಯ ಬೆಳಕಾಗಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳಲ್ಲಿ ಭರವಸೆ ಮೂಡಿಸಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>‘ಮಕ್ಕಳು ಉಪದೇಶಕ್ಕಿಂತ ಪಾಲಕರ ಆಚರಣೆಯನ್ನು ಅನುಕರಿಸುತ್ತಾರೆ. ಮಕ್ಕಳಲ್ಲಿ ಬದಲಾವಣೆ ಕಾಣುವ ಮೊದಲು ಪಾಲಕರು ಬದಲಾಗಬೇಕು’ ಎಂದು ಚಿಂತಕಿ ಲೀಲಾ ಕಾರಟಗಿ ಸಲಹೆ ನೀಡಿದರು.</p>.<p>ಇಲ್ಲಿಯ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ‘ಮಕ್ಕಳ ಸಾತ್ವಿಕ ಬೆಳವಣಿಗೆ– ಪಾಲಕರ ಜವಾಬ್ದಾರಿ’ ಕುರಿತ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪಾಲಕರು ಆದರ್ಶದ ಬದುಕು ಕಟ್ಟಿಕೊಂಡರೆ ಮಕ್ಕಳು ಸಹಜವಾಗಿ ಆದರ್ಶದ ಮಾರ್ಗದಲ್ಲಿ ಸಾಗುತ್ತಾರೆ. ಮಕ್ಕಳು ಎಂಥವರ ಸಹವಾಸದಲ್ಲಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕು’ ಎಂದು ಹೇಳಿದರು.</p>.<p>‘ಪಾಲಕರು ನೈತಿಕ ಮಾರ್ಗದಲ್ಲಿ ಸಾಗದಿದ್ದರೆ ಮಕ್ಕಳು ನೈತಿಕ ಬೆಳವಣಿಗೆಯ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗದು. ಶಿಕ್ಷಣದ ಪ್ರಮಾಣಪತ್ರ ಕೊಡುವ ಕಾಲೇಜುಗಳು ಇವೆ. ಮನುಷ್ಯತ್ವ ಹೇಳಿಕೊಡುವ ಕಾಲೇಜುಗಳು ಅಸ್ತಿತ್ವಕ್ಕೆ ಬಂದಿಲ್ಲ. ಶ್ರೇಷ್ಠ ಸಂಸ್ಕಾರ ಇರುವ ದೇಶದಲ್ಲಿ ಪಾಲಕರ ಹೊಣೆ ಅಧಿಕ ಇದೆ’ ಎಂದು ತಿಳಿಸಿದರು.</p>.<p>‘ವಿದ್ಯೆ ಭರವಸೆಯ ಬೆಳಕಾಗಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳಲ್ಲಿ ಭರವಸೆ ಮೂಡಿಸಬೇಕು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>