<p>ಬೀದರ್: ಉಚಿತ ಆಮ್ಲಜನಕಕ್ಕೆ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ್ ಹೇಳಿದರು.</p>.<p>ನಗರದ ವೈದಿಕ ಕಾಲೊನಿಯಲ್ಲಿ ಬರೀದ್ಶಾಹಿ ಯೋಗ ತಂಡದ ವತಿಯಿಂದ ನಡೆದ ಸಸಿ ವಿತರಣೆ, ನೆಡುವಿಕೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ಪ್ರಾಣ ಕಳೆದುಕೊಂಡರು. ಗಿಡಮರಗಳು ಉಚಿತವಾಗಿ ಆಮ್ಲಜನಕ ಕೊಡುತ್ತಿದ್ದರೂ ಸ್ವಾರ್ಥಕ್ಕೆ ಬೆನ್ನು ಬಿದ್ದು ಕಾಡು ನಾಶ ಮಾಡುತ್ತಿದ್ದೇವೆ. ಆಮ್ಲಜನಕ ಕೊರತೆ ಅದರ ಪರಿಣಾಮವೇ ಆಗಿದೆ ಎಂದು ತಿಳಿಸಿದರು.</p>.<p>ಆಮ್ಲಜನಕ ನೀಡುವ ಅಕೇಸಿಯಾ, ಪಾಮ್, ಅಲೋವಿರಾ ಮೊದಲಾದ ಗಿಡಗಳನ್ನು ಮನೆ ಆವರಣದಲ್ಲಿ ನೆಡಬೇಕು ಎಂದು ಯೋಗ ಕೇಂದ್ರದ ಮೇಲ್ವಿಚಾರಕ ಗಂಗಪ್ಪ ಸಾವಳೆ ಹೇಳಿದರು.</p>.<p>ಉದ್ಯಮಿ ರಾಮಕೃಷ್ಣ ಮುನಿಗ್ಯಾಲ, ಕಾಲೊನಿಯ ಗುರುರಾಜ, ಸವಿತಾ, ಶಿವಲೀಲಾ, ಅಕ್ಷತಾ, ಉತ್ತರಾ, ಸಂಜೀವಕುಮಾರ ಶೀಲವಂತ, ಸುರೇಶ, ನಿಜಲಿಂಗಪ್ಪ ತಗಾರೆ, ಗಂಗಾಧರ ಪಾಟೀಲ, ರಮೇಶ, ಬಸವರಾಜ, ಉಮೇಶ, ಚಂದ್ರಶೇಖರ ದೇವಣಿ, ವಿಜಯಕುಮಾರ ಬಚ್ಚಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಉಚಿತ ಆಮ್ಲಜನಕಕ್ಕೆ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ್ ಹೇಳಿದರು.</p>.<p>ನಗರದ ವೈದಿಕ ಕಾಲೊನಿಯಲ್ಲಿ ಬರೀದ್ಶಾಹಿ ಯೋಗ ತಂಡದ ವತಿಯಿಂದ ನಡೆದ ಸಸಿ ವಿತರಣೆ, ನೆಡುವಿಕೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೋವಿಡ್ ಸಂದರ್ಭದಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ಪ್ರಾಣ ಕಳೆದುಕೊಂಡರು. ಗಿಡಮರಗಳು ಉಚಿತವಾಗಿ ಆಮ್ಲಜನಕ ಕೊಡುತ್ತಿದ್ದರೂ ಸ್ವಾರ್ಥಕ್ಕೆ ಬೆನ್ನು ಬಿದ್ದು ಕಾಡು ನಾಶ ಮಾಡುತ್ತಿದ್ದೇವೆ. ಆಮ್ಲಜನಕ ಕೊರತೆ ಅದರ ಪರಿಣಾಮವೇ ಆಗಿದೆ ಎಂದು ತಿಳಿಸಿದರು.</p>.<p>ಆಮ್ಲಜನಕ ನೀಡುವ ಅಕೇಸಿಯಾ, ಪಾಮ್, ಅಲೋವಿರಾ ಮೊದಲಾದ ಗಿಡಗಳನ್ನು ಮನೆ ಆವರಣದಲ್ಲಿ ನೆಡಬೇಕು ಎಂದು ಯೋಗ ಕೇಂದ್ರದ ಮೇಲ್ವಿಚಾರಕ ಗಂಗಪ್ಪ ಸಾವಳೆ ಹೇಳಿದರು.</p>.<p>ಉದ್ಯಮಿ ರಾಮಕೃಷ್ಣ ಮುನಿಗ್ಯಾಲ, ಕಾಲೊನಿಯ ಗುರುರಾಜ, ಸವಿತಾ, ಶಿವಲೀಲಾ, ಅಕ್ಷತಾ, ಉತ್ತರಾ, ಸಂಜೀವಕುಮಾರ ಶೀಲವಂತ, ಸುರೇಶ, ನಿಜಲಿಂಗಪ್ಪ ತಗಾರೆ, ಗಂಗಾಧರ ಪಾಟೀಲ, ರಮೇಶ, ಬಸವರಾಜ, ಉಮೇಶ, ಚಂದ್ರಶೇಖರ ದೇವಣಿ, ವಿಜಯಕುಮಾರ ಬಚ್ಚಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>