<p><strong>ಬೀದರ್:</strong> ‘ಎಲ್ಲ ರೀತಿಯ ಹೋರಾಟಗಳಿಗೆ ಸಾಹಿತ್ಯವೇ ಭದ್ರ ಬುನಾದಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ತಿಳಿಸಿದರು.</p>.<p>ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿರುವ ವೀರಲೋಕ ‘ಪುಸ್ತಕ ಸಂತೆ’ಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ರಾಜಕೀಯ’ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.</p>.<p>ಯಾವುದೇ ರೀತಿಯ ಚಳವಳಿಯಿರಲಿ ಅದಕ್ಕೆ ಸಾಹಿತ್ಯವೇ ದಿಕ್ಕು ದಿಸೆ ಕೊಡುವ ಶಕ್ತಿ ಹೊಂದಿದೆ. ಇದು ನನ್ನ ವೈಯಕ್ತಿಕ ಅನುಭವ. ನಾನು ಈ ಹಿಂದೆ ಎಸ್ಎಫ್ಐನಲ್ಲಿ ಕಾರ್ಯಕರ್ತನಾಗಿದ್ದೆ. ಆನಂತರ ಎಬಿವಿಪಿಯಲ್ಲಿ ತೊಡಗಿಸಿಕೊಂಡೆ. ಸದ್ಯ ಬಿಜೆಪಿಯಲ್ಲಿರುವೆ. ವಿದ್ಯಾರ್ಥಿ ಹೋರಾಟ, ರಾಜಕೀಯ ಹೋರಾಟ ಎಲ್ಲದಕ್ಕೂ ದಿಕ್ಕು ಕೊಡುವ ಶಕ್ತಿ ಸಾಹಿತ್ಯದಲ್ಲಿದೆ ಎಂದು ಹೇಳಿದರು.</p>.<p>ಆಯಾ ಕಾಲಕ್ಕೆ ಹೋರಾಟದ ವಿಷಯ, ಸ್ವರೂಪಗಳು ಬದಲಾಗುತ್ತಿರುತ್ತವೆ. ಆದರೆ, ಅದಕ್ಕೆ ದಿಕ್ಕು ಕೊಡುವುದೇ ಸಾಹಿತ್ಯ. ಘೋಷಣೆ, ಭಾಷಣ ಎಲ್ಲವೂ ಸಾಹಿತ್ಯದ ಮೂಲವೇ ಆಗಿದೆ ಎಂದು ತಿಳಿಸಿದರು.</p>.<p>ನಟ ಅಶ್ವಥ್ ನೀನಾಸಂ ಮಾತನಾಡಿ, ನಮ್ಮ ಮಾತುಗಳಿಂದ ಬರುವ ಪ್ರತಿ ಮಾತು ಕೂಡ ಸಾಹಿತ್ಯವೇ ಆಗಿದೆ. ಪಂಪ, ರನ್ನನ ಸಾಹಿತ್ಯ ನನ್ನನ್ನು ನಟನೆಯತ್ತ ಕೊಂಡೊಯ್ದಿದೆ. ಜೊತೆಗೆ ಸಾಮಾಜಿಕ ಬದ್ಧತೆ ಕೂಡ ಬೆಳೆಸಿರುವುದು ವಿಶೇಷ ಎಂದು ಹೇಳಿದರು.</p>.<p>ಸಾಹಿತ್ಯವೂ ಸಾಮಾಜಿಕ ಪ್ರಜ್ಞೆ ಬೆಳೆಸಿ, ಅದರೊಂದಿಗೆ ಪ್ರತಿಸ್ಪಂದಿಸುವ ಗುಣವೂ ಕಲಿಸಿಕೊಡುತ್ತದೆ. ಎಲ್ಲದರ ಮೂಲ ಸಾಹಿತ್ಯ ಎಂದು ಹೇಳಿದರೆ ತಪ್ಪಾಗಲಾರದು.</p>.<p>ಕುಸುಮಾ ಆಯರಹಳ್ಳಿ, ಸಾಹಿತ್ಯಕ್ಕೆ ರಾಜಕಾರಣಿಗಳ ಕೊಡುಗೆಯೂ ಬಹಳ ದೊಡ್ಡದಿದೆ. ಅವರ ಉದ್ದೇಶ ಏನೇ ಆಗಿರಬಹುದು. ಆದರೆ, ಅವರ ಪ್ರತಿ ಮಾತುಗಳಲ್ಲಿ ಸಾಹಿತ್ಯ ಇರುತ್ತದೆ ಎಂದರು.</p>.<p>ರಮೇಶ ದೊಡ್ಡಪುರ ಕಾರ್ಯಕ್ರಮ ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಬೀದರ್ ಮಹಾನಗರ ಪಾಲಿಕೆಯ ಸದಸ್ಯ ಶಶಿಧರ ಹೊಸಳ್ಳಿ, ರಾಜಕುಮಾರ್ ಪಸಾರ, ಧನರಾಜ ಹಂಗರಗಿ, ಆದೀಶ್ ವಾಲಿ ಹಾಜರಿದ್ದರು.</p>.<div><blockquote>ದೇವನೂರ ಮಹಾದೇವ ಬಸಲಿಂಗಪ್ಪನವರ ಸಾಹಿತ್ಯದ ಓದಿನಿಂದಲೇ ನಾನು ಹೋರಾಟದ ಹಾದಿ ಹಿಡಿದವನು. ಅವರೇ ನನಗೆ ಸ್ಫೂರ್ತಿ.</blockquote><span class="attribution"> ಎನ್. ರವಿಕುಮಾರ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ </span></div>.<div><blockquote>ರಾಜಕಾರಣಿಗಳು ಹುಟ್ಟಿಕೊಳ್ಳುವುದೇ ವಿಶ್ವವಿದ್ಯಾಲಯದ ಕ್ಯಾಂಪಸ್ಗಳು ಆಂದೋಲನಗಳಿಂದ. ಇದರಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ.</blockquote><span class="attribution">ಸಂಗಮೇಶ ಯುವ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ಎಲ್ಲ ರೀತಿಯ ಹೋರಾಟಗಳಿಗೆ ಸಾಹಿತ್ಯವೇ ಭದ್ರ ಬುನಾದಿ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ತಿಳಿಸಿದರು.</p>.<p>ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿರುವ ವೀರಲೋಕ ‘ಪುಸ್ತಕ ಸಂತೆ’ಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಸಾಹಿತ್ಯ ಮತ್ತು ರಾಜಕೀಯ’ ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.</p>.<p>ಯಾವುದೇ ರೀತಿಯ ಚಳವಳಿಯಿರಲಿ ಅದಕ್ಕೆ ಸಾಹಿತ್ಯವೇ ದಿಕ್ಕು ದಿಸೆ ಕೊಡುವ ಶಕ್ತಿ ಹೊಂದಿದೆ. ಇದು ನನ್ನ ವೈಯಕ್ತಿಕ ಅನುಭವ. ನಾನು ಈ ಹಿಂದೆ ಎಸ್ಎಫ್ಐನಲ್ಲಿ ಕಾರ್ಯಕರ್ತನಾಗಿದ್ದೆ. ಆನಂತರ ಎಬಿವಿಪಿಯಲ್ಲಿ ತೊಡಗಿಸಿಕೊಂಡೆ. ಸದ್ಯ ಬಿಜೆಪಿಯಲ್ಲಿರುವೆ. ವಿದ್ಯಾರ್ಥಿ ಹೋರಾಟ, ರಾಜಕೀಯ ಹೋರಾಟ ಎಲ್ಲದಕ್ಕೂ ದಿಕ್ಕು ಕೊಡುವ ಶಕ್ತಿ ಸಾಹಿತ್ಯದಲ್ಲಿದೆ ಎಂದು ಹೇಳಿದರು.</p>.<p>ಆಯಾ ಕಾಲಕ್ಕೆ ಹೋರಾಟದ ವಿಷಯ, ಸ್ವರೂಪಗಳು ಬದಲಾಗುತ್ತಿರುತ್ತವೆ. ಆದರೆ, ಅದಕ್ಕೆ ದಿಕ್ಕು ಕೊಡುವುದೇ ಸಾಹಿತ್ಯ. ಘೋಷಣೆ, ಭಾಷಣ ಎಲ್ಲವೂ ಸಾಹಿತ್ಯದ ಮೂಲವೇ ಆಗಿದೆ ಎಂದು ತಿಳಿಸಿದರು.</p>.<p>ನಟ ಅಶ್ವಥ್ ನೀನಾಸಂ ಮಾತನಾಡಿ, ನಮ್ಮ ಮಾತುಗಳಿಂದ ಬರುವ ಪ್ರತಿ ಮಾತು ಕೂಡ ಸಾಹಿತ್ಯವೇ ಆಗಿದೆ. ಪಂಪ, ರನ್ನನ ಸಾಹಿತ್ಯ ನನ್ನನ್ನು ನಟನೆಯತ್ತ ಕೊಂಡೊಯ್ದಿದೆ. ಜೊತೆಗೆ ಸಾಮಾಜಿಕ ಬದ್ಧತೆ ಕೂಡ ಬೆಳೆಸಿರುವುದು ವಿಶೇಷ ಎಂದು ಹೇಳಿದರು.</p>.<p>ಸಾಹಿತ್ಯವೂ ಸಾಮಾಜಿಕ ಪ್ರಜ್ಞೆ ಬೆಳೆಸಿ, ಅದರೊಂದಿಗೆ ಪ್ರತಿಸ್ಪಂದಿಸುವ ಗುಣವೂ ಕಲಿಸಿಕೊಡುತ್ತದೆ. ಎಲ್ಲದರ ಮೂಲ ಸಾಹಿತ್ಯ ಎಂದು ಹೇಳಿದರೆ ತಪ್ಪಾಗಲಾರದು.</p>.<p>ಕುಸುಮಾ ಆಯರಹಳ್ಳಿ, ಸಾಹಿತ್ಯಕ್ಕೆ ರಾಜಕಾರಣಿಗಳ ಕೊಡುಗೆಯೂ ಬಹಳ ದೊಡ್ಡದಿದೆ. ಅವರ ಉದ್ದೇಶ ಏನೇ ಆಗಿರಬಹುದು. ಆದರೆ, ಅವರ ಪ್ರತಿ ಮಾತುಗಳಲ್ಲಿ ಸಾಹಿತ್ಯ ಇರುತ್ತದೆ ಎಂದರು.</p>.<p>ರಮೇಶ ದೊಡ್ಡಪುರ ಕಾರ್ಯಕ್ರಮ ನಡೆಸಿಕೊಟ್ಟರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಬೀದರ್ ಮಹಾನಗರ ಪಾಲಿಕೆಯ ಸದಸ್ಯ ಶಶಿಧರ ಹೊಸಳ್ಳಿ, ರಾಜಕುಮಾರ್ ಪಸಾರ, ಧನರಾಜ ಹಂಗರಗಿ, ಆದೀಶ್ ವಾಲಿ ಹಾಜರಿದ್ದರು.</p>.<div><blockquote>ದೇವನೂರ ಮಹಾದೇವ ಬಸಲಿಂಗಪ್ಪನವರ ಸಾಹಿತ್ಯದ ಓದಿನಿಂದಲೇ ನಾನು ಹೋರಾಟದ ಹಾದಿ ಹಿಡಿದವನು. ಅವರೇ ನನಗೆ ಸ್ಫೂರ್ತಿ.</blockquote><span class="attribution"> ಎನ್. ರವಿಕುಮಾರ್ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ </span></div>.<div><blockquote>ರಾಜಕಾರಣಿಗಳು ಹುಟ್ಟಿಕೊಳ್ಳುವುದೇ ವಿಶ್ವವಿದ್ಯಾಲಯದ ಕ್ಯಾಂಪಸ್ಗಳು ಆಂದೋಲನಗಳಿಂದ. ಇದರಲ್ಲಿ ಸಾಹಿತ್ಯದ ಪಾತ್ರ ಬಹಳ ದೊಡ್ಡದಿದೆ.</blockquote><span class="attribution">ಸಂಗಮೇಶ ಯುವ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>