<p><strong>ಬೀದರ್: </strong>ನವೆಂಬರ್ನಲ್ಲಿ ‘ನನ್ನ ಕನಸು - ನನ್ನ ಯೋಜನೆ’ ಕುರಿತ ರಾಷ್ಟ್ರ ಮಟ್ಟದ ವಿಡಿಯೊ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಪ್ರಾಪ್ತಿ ಅರಳಿ ಈಗ ರಾಷ್ಟ್ರ ಮಟ್ಟದ ಮತ್ತೊಂದು ಪ್ರಶಸ್ತಿ ಪಡೆಯುವುದರೊಂದಿಗೆ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಹೆಚ್ಚಿಸಿಕೊಡಿದ್ದಾಳೆ.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ರೇಂಜರಿಂಗ್ನ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ದಿವಾಸ್ – ಅರೌಂಡ್ ದ ವರ್ಲ್ಡ್ ’ ಶೀರ್ಷಿಕೆಯಡಿ ದೇಶದ ಮಹಿಳಾ ಸಾಧಿಕಿಯರ ಕುರಿತು ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಬದುಕು ಮತ್ತು ಸಾಧನೆ ಹಾಗೂ ಅವರು ದೇಶಕ್ಕ ನೀಡಿದ ಸಂದೇಶಗಳು ಪ್ರಸ್ತುತ ಪಡಿಸುವ ಸ್ಪರ್ಧೆ ಏರ್ಪಸಿತ್ತು. ಈ ಸ್ಪರ್ಧೆಯಲ್ಲಿ ಬೀದರ್ನ ಜ್ಞಾನ ಸುಧಾ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತಿ ಅರಳಿ ‘ಮದರ್ ತೆರೆಸಾ’ ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಜೀವನ ಚರಿತ್ರೆ ಪ್ರದರ್ಶಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾಳೆ.</p>.<p>ದೇಶದ ಎಲ್ಲ ರಾಜ್ಯಗಳಿಂದ ನೂರಾರು ವಿಧ್ಯಾರ್ಥಿನಿಯರು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಅಂತಿಮ ಕಣದಲ್ಲಿ 20 ಸ್ಪರ್ಧಾಳುಗಳು ಉಳಿದಿದ್ದರು. ನಿರ್ಣಾಯಕ ಹಂತದ ಸ್ಪರ್ಧೆಯಲ್ಲಿ ಪ್ರಾಪ್ತಿ ಅರಳಿ ಎರಡನೇ ಸ್ಥಾನ ಪಡೆದು ವಿಜೇತರಾಗಿದ್ದಾಳೆ.<br />ಫೈನಲ್ಸ್ ತಲುಪಿದ 20 ವಿದ್ಯಾರ್ಥಿನಿಯರಲ್ಲಿ ಬೀದರ್ನ ಇಬ್ಬರು ವಿದ್ಯಾರ್ಥಿನಿಯರು ಸ್ಥಾನ ಪಡೆದಿರುವುದು ವಿಶೇಷವಾಗಿತ್ತು. ಆದರೆ ಅಂತಿಮವಾಗಿ ಕರ್ನಾಟಕದ ಪ್ರಾಪ್ತಿ ಅರಳಿ ವಿಜೇತರಾಗಿದ್ದು ಹೆಮ್ಮೆಯ ವಿಷಯವಾಗಿದೆ.</p>.<p>ರೇಂಜರಿಂಗ್ನ ಶತಮಾನೋತ್ಸವದ ಅಂಗವಾಗಿ ಈ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಮಹಿಳಾ ಸಾಧಕೀಯರ ಕುರಿತು ಅಧ್ಯಯನ ಮಾಡಿವಲ್ಲಿ ಅವರ ಸಾಧನೆ ಮತ್ತು ಸಂದೇಶಗಳಿಂದ ಪ್ರೇರಣೆ ಹೊಂದಲು ಸಹಕಾರಿಯಾಗುತ್ತದೆ.</p>.<p>‘ಪ್ರಾಪ್ತಿ ಅರಳಿಯ ರಾಷ್ಟಮಟ್ಟದ ಈ ಸಾಧನೆ ರಾಜ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸಿದಂತಾಗಿದೆ ಅವಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಇತರೆ ವಿದ್ಯಾರ್ಥಿಗಳಿಗೆ ಇವಳು ಪ್ರೇರೇಪಣೆಯಾಗಲಿದ್ದಾಳೆ’ ಎಂದು ಎಂದು ಭಾರತ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲೆಯ ಮುಖ್ಯಸ್ಥೆ ಗುರಮ್ಮಾ ಸಿದ್ದಾರೆಡ್ಡಿ ರವರು ತಿಳಿಸಿದ್ದಾರೆ.</p>.<p>‘ಪ್ರಾಪ್ತಿ ಅರಳಿಯ ಸಾಧನೆ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಗೌರವ ತಂದಿದ್ದು ಅವಳ ಈ ಸಾಧನೆ ಇತರೆ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪ್ರವೇಶ ಪಡೆದು ಸಾಮಾಜಮುಖಿಗಳಲಿ’ ಎಂದು ರಾಜ್ಯದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಶುಭ ಹಾರೈಸಿದ್ದಾರೆ.</p>.<p>ಪದವಿ ಪೂರ್ವ ಕಾಲೇಜಿನ ಉಪ ನಿರ್ದೆಶಕ ಚಂದ್ರಕಾಂತ ಶಾಬಾದಕರ್, ಜ್ಞಾನ ಸುಧಾ ಕಾಲೇಜಿನ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್, ನಿರ್ದೇಶಕರಾದ ಮುನೇಶ್ವರ ಲಾಖಾ, ಗೈಡ್ಸ್ ಆಯುಕ್ತೆ ಲೀಲಾವತಿ ಚಾಕೋತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ನವೆಂಬರ್ನಲ್ಲಿ ‘ನನ್ನ ಕನಸು - ನನ್ನ ಯೋಜನೆ’ ಕುರಿತ ರಾಷ್ಟ್ರ ಮಟ್ಟದ ವಿಡಿಯೊ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಪ್ರಾಪ್ತಿ ಅರಳಿ ಈಗ ರಾಷ್ಟ್ರ ಮಟ್ಟದ ಮತ್ತೊಂದು ಪ್ರಶಸ್ತಿ ಪಡೆಯುವುದರೊಂದಿಗೆ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಹೆಚ್ಚಿಸಿಕೊಡಿದ್ದಾಳೆ.</p>.<p>ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ರೇಂಜರಿಂಗ್ನ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ದಿವಾಸ್ – ಅರೌಂಡ್ ದ ವರ್ಲ್ಡ್ ’ ಶೀರ್ಷಿಕೆಯಡಿ ದೇಶದ ಮಹಿಳಾ ಸಾಧಿಕಿಯರ ಕುರಿತು ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಬದುಕು ಮತ್ತು ಸಾಧನೆ ಹಾಗೂ ಅವರು ದೇಶಕ್ಕ ನೀಡಿದ ಸಂದೇಶಗಳು ಪ್ರಸ್ತುತ ಪಡಿಸುವ ಸ್ಪರ್ಧೆ ಏರ್ಪಸಿತ್ತು. ಈ ಸ್ಪರ್ಧೆಯಲ್ಲಿ ಬೀದರ್ನ ಜ್ಞಾನ ಸುಧಾ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತಿ ಅರಳಿ ‘ಮದರ್ ತೆರೆಸಾ’ ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಜೀವನ ಚರಿತ್ರೆ ಪ್ರದರ್ಶಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾಳೆ.</p>.<p>ದೇಶದ ಎಲ್ಲ ರಾಜ್ಯಗಳಿಂದ ನೂರಾರು ವಿಧ್ಯಾರ್ಥಿನಿಯರು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಅಂತಿಮ ಕಣದಲ್ಲಿ 20 ಸ್ಪರ್ಧಾಳುಗಳು ಉಳಿದಿದ್ದರು. ನಿರ್ಣಾಯಕ ಹಂತದ ಸ್ಪರ್ಧೆಯಲ್ಲಿ ಪ್ರಾಪ್ತಿ ಅರಳಿ ಎರಡನೇ ಸ್ಥಾನ ಪಡೆದು ವಿಜೇತರಾಗಿದ್ದಾಳೆ.<br />ಫೈನಲ್ಸ್ ತಲುಪಿದ 20 ವಿದ್ಯಾರ್ಥಿನಿಯರಲ್ಲಿ ಬೀದರ್ನ ಇಬ್ಬರು ವಿದ್ಯಾರ್ಥಿನಿಯರು ಸ್ಥಾನ ಪಡೆದಿರುವುದು ವಿಶೇಷವಾಗಿತ್ತು. ಆದರೆ ಅಂತಿಮವಾಗಿ ಕರ್ನಾಟಕದ ಪ್ರಾಪ್ತಿ ಅರಳಿ ವಿಜೇತರಾಗಿದ್ದು ಹೆಮ್ಮೆಯ ವಿಷಯವಾಗಿದೆ.</p>.<p>ರೇಂಜರಿಂಗ್ನ ಶತಮಾನೋತ್ಸವದ ಅಂಗವಾಗಿ ಈ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಮಹಿಳಾ ಸಾಧಕೀಯರ ಕುರಿತು ಅಧ್ಯಯನ ಮಾಡಿವಲ್ಲಿ ಅವರ ಸಾಧನೆ ಮತ್ತು ಸಂದೇಶಗಳಿಂದ ಪ್ರೇರಣೆ ಹೊಂದಲು ಸಹಕಾರಿಯಾಗುತ್ತದೆ.</p>.<p>‘ಪ್ರಾಪ್ತಿ ಅರಳಿಯ ರಾಷ್ಟಮಟ್ಟದ ಈ ಸಾಧನೆ ರಾಜ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸಿದಂತಾಗಿದೆ ಅವಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಇತರೆ ವಿದ್ಯಾರ್ಥಿಗಳಿಗೆ ಇವಳು ಪ್ರೇರೇಪಣೆಯಾಗಲಿದ್ದಾಳೆ’ ಎಂದು ಎಂದು ಭಾರತ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲೆಯ ಮುಖ್ಯಸ್ಥೆ ಗುರಮ್ಮಾ ಸಿದ್ದಾರೆಡ್ಡಿ ರವರು ತಿಳಿಸಿದ್ದಾರೆ.</p>.<p>‘ಪ್ರಾಪ್ತಿ ಅರಳಿಯ ಸಾಧನೆ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಗೌರವ ತಂದಿದ್ದು ಅವಳ ಈ ಸಾಧನೆ ಇತರೆ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪ್ರವೇಶ ಪಡೆದು ಸಾಮಾಜಮುಖಿಗಳಲಿ’ ಎಂದು ರಾಜ್ಯದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಶುಭ ಹಾರೈಸಿದ್ದಾರೆ.</p>.<p>ಪದವಿ ಪೂರ್ವ ಕಾಲೇಜಿನ ಉಪ ನಿರ್ದೆಶಕ ಚಂದ್ರಕಾಂತ ಶಾಬಾದಕರ್, ಜ್ಞಾನ ಸುಧಾ ಕಾಲೇಜಿನ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್, ನಿರ್ದೇಶಕರಾದ ಮುನೇಶ್ವರ ಲಾಖಾ, ಗೈಡ್ಸ್ ಆಯುಕ್ತೆ ಲೀಲಾವತಿ ಚಾಕೋತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>