ಬೀದರ್: ಉತ್ತರ ಪ್ರದೇಶದ ಸಾಕೇತ ನಗರ(ಅಯೋಧ್ಯ)ದ ಜಮೀನಿನಲ್ಲಿ ದೊರೆಯುತ್ತಿರುವ ಗೌತಮ ಬುದ್ಧನ ವಿಗ್ರಹ, ಸ್ತೂಪ ಹಾಗೂ ಇತರ ಅವಶೇಷಗಳ ರಕ್ಷಣೆಗೆ ಒತ್ತಾಯಿಸಿ ಬುದ್ಧಿಸ್ಟ್ ಇಂಟರ್ನ್ಯಾಷನಲ್ ನೆಟ್ವರ್ಕ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ನಗರದಲ್ಲಿ ಬುಧವಾರ (ಆ.5) ಮೆರವಣಿಗೆ ನಡೆಸಲು ನಿರ್ಧರಿಸಿವೆ.